ಹುಬ್ಬಳಿ: ಬಿಜೆಪಿಯ ಆಪರೇಷನ್ ಕಮಲ ವಿರೋಧಿಸಿ ಜೆಡಿಎಸ್
ನಿಂದ ಟೈರ್ ಗೆ ಬೆಮಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.
ಇಂದು ನಗರದ ಸಂಗೊಳ್ಳಿ
ರಾಯಣ್ಣ ಸರ್ಕಲ್ ನಲ್ಲಿ ನೂರಾರು ಕಾರ್ಯಕರ್ತರು ಸೇರಿ ಬಿಜೆಪಿ ವಿರುದ್ಧ ಘೋಷಣೆಗಳನ್ನು ಹಾಕಿ ಹಾಗೂ
ಮೋದಿ, ಅಮಿತ್ ಶಾ, ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ.
ಸರ್ಕಾರ
ಅಭಿವೃದ್ಧಿಗೆ ಒತ್ತು ನೀಡುತ್ತಾ ಬರುತ್ತಿದೆ. ಆಪರೇಷನ್ ಕಮಲ ಕೈ ಬಿಡಿ. ಇಲ್ಲವಾದಲ್ಲಿ ತೀವ್ರ
ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಜೆಡಿಎಸ್ ಕಾರ್ಯಕರ್ತರು ಎಚ್ಚರಿಸಿದ್ದಾರೆ.