ಸಿದ್ದು ಅಥಣಿಯಲ್ಲಿ ಅಬ್ಬರದ ಪ್ರಚಾರ

ಸಿದ್ದು ಅಥಣಿಯಲ್ಲಿ ಅಬ್ಬರದ ಪ್ರಚಾರ

ಅಥಣಿ, ನ. 29: ರಾಜ್ಯದಲ್ಲಿ ಉಪಚುನಾವಣೆಯ ಅಬ್ಬರ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಥಣಿ ವಿಧಾನಸಭೆ ಕ್ಷೇತ್ರದ ತೆಲಸಂಗಿ ಪಟ್ಟಣದಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಪಕ್ಷದ ಅಭ್ಯರ್ಥಿ ಗಜಾನನ ಮನಸೂಳಿ ಅವರ ಪರ ಮತ ಯಾಚಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾದ ಎಸ್.ಆರ್.ಪಾಟೀಲ್, ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ವಿನಯ ಕುಲಕರ್ಣಿ, ಶಾಸಕರಾದ ಸುನಿಲ್ ಪಾಟೀಲ್, ಆನಂದ್ ನ್ಯಾಮಗೌಡ ಮತ್ತಿರರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos