ಪಾಕ್ ಪರ ಘೋಷಣೆ: ಬಾಂಡ್ ಕೊಟ್ಟವರು ಯಾರು?

ಪಾಕ್ ಪರ ಘೋಷಣೆ: ಬಾಂಡ್ ಕೊಟ್ಟವರು ಯಾರು?

ಹುಬ್ಬಳ್ಳಿ, ಫೆ. 18: ಪಾಕ್ ಪರ ‌ಘೋಷಣೆ ಕೂಗಿದ ಕಾಶ್ಮೀರ ಮೂಲದ ವಿದ್ಯಾರ್ಥಿಗಳಾದ ಅಮೀರ್,ಬಾಸಿತ್,ತಾಲಿಬ್ ಅವರ ಕುಟುಂಬಸ್ಥರು ಹುಬ್ಬಳ್ಳಿಗೆ ಆಗಮಿಸಿದ್ದಾರೆ.

ಹುಬ್ಬಳ್ಳಿಯ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿದ ಕಾಶ್ಮೀರಿ ವಿದ್ಯಾರ್ಥಿಗಳ ಕುಟುಂಬಸ್ಥರು ಘಟನೆಯ ಬಗ್ಗೆ ಪೊಲೀಸ್ ಆಯುಕ್ತರಿಂದ ಮಾಹಿತಿ‌ ಪಡೆದುಕೊಂಡರು.

ನವನಗರದಲ್ಲಿರೋ ಹು-ಧಾ ಕಮೀಷನರ್ ಕಚೇರಿಗೆ ಆಗಮಿಸಿದ ಸಂಬಂಧಿಗಳು ತಮ್ಮ ಮಕ್ಕಳ ಬಗ್ಗೆ ಕಮೀಷನರ್ ಅವರಿಂದ ಘಟನೆ ಮಾಹಿತಿ ಪದೆದುಕೊಂಡರು. ಬಳಿಕ ಪೊಲೀಸರು ತಮ್ಮ ವಾಹನದಲ್ಲಿಯೇ ಆರೋಪಿಗಳ‌ ಸಂಬಂಧಿಗಳನ್ನು  ಬೆಳಗಾಗಿ ಜೈಲಿಗೆ ಕಳುಹಿಸಿಕೊಟ್ಟಿದ್ದಾರೆ.

ಪ್ರಕರಣದ ಕುರಿತು‌ ಇಂದು ಪ್ರತಿಕ್ರಿಯೆ ನೀಡಿದ ಪೊಲೀಸ್ ಆಯುಕ್ತ ಆರ್ ದಿಲೀಪ್ ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿದ್ದಾರೆ. ಈ‌ ಪ್ರಕರಣವನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ ಪ್ರಕರಣದ ವಿಡಿಯೋ ಚಿತ್ರೀಕರಣವನ್ನು ಕುಂದಗೋಳ‌ ಕ್ರಾಸ್ ನ ಕೆ ಎಲ್ ಇ ಹಾಸ್ಟೇಲ್ ನಲ್ಲಿ ಮಾಡಿರುವಸರಿಂದ ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಹುಬ್ಬಳ್ಳಿ ಗ್ರಾಮೀಣ ವರ್ಗಾಯಿಸಿದ್ದೇವೆ ಎಂದರು.

ವಿದ್ಯಾರ್ಥಿಗನ್ನುಯ ಬಾಂಡ್ ಮೇಲೆ ಬಿಡುಗಡೆ ‌ಮಾಡಿದ್ದರ ಬಗ್ಗೆ ಮಾತನಾಡಲು‌ ನಿರಾಕರಿಸಿದರು.

ಬಾಂಡ್ ಬಗ್ಗೆ ನಾನು ಈ ಸಮಯದಲ್ಲಿ ಮಾತನಾಡುವದಿಲ್ಲ. ಪ್ರಕರಣ ತನೀಖೆಯ ಹಂತದಲ್ಲಿದೆ. ಈ ವೇಳೆ ನಾನೇನು ಮಾತನಾಡುವದಿಲ್ಲ. ವಿಧ್ಯಾರ್ಥಿಗಳ ಕುಟುಂಬಸ್ಥರು ಬಂದಿರೋ ಬಗ್ಗೆ ಮಾತನಾಡದ ಹಿಂದೇಟು ಹಾಕಿದರು.‌ ಬಾಂಡ್ ಬಗ್ಗೆ ಇರುವ ಅನುಮಾನವನ್ನು ಕಮೀಷನರ್ ಜೀವಂತವಾಗಿಟ್ಟಿದ್ದಾರೆ. ಪ್ರಕರಣದಲ್ಲಿ ಸಿಆರ್ ಪಿಸಿ ಅಡಿ ಬಾಂಡ್ ಕೊಟ್ಟಿದ್ದು ಯಾರು..?

ಸೆಕ್ಷನ್ 124A ಅಡಿ ಪ್ರಕರಣದ ದಾಖಾಲಾಗಿದ್ದರು ಬಾಂಡ್ ಮೇಲೆ ಬಿಟ್ಟಿದ್ದಕ್ಕೆ ಕೊನೆಗೂ ಪೊಲೀಸ್ ಆಯುಕ್ತ‌ರು ಸ್ಪಷ್ಟನೆ ನೀಡಲಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos