ಲಖನೌ, ಜ . 3 : ರಾಜಸ್ಥಾನದ ಕೋಟಾದಲ್ಲಿ ಮೃತಪಟ್ಟಿರುವ ಮಕ್ಕಳ ಪೋಷಕರನ್ನೇಕೆ ಭೇಟಿ ಮಾಡಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಚೇರಿ ಪ್ರಶ್ನಿಸಿದೆ.ಸರಣಿ ಟ್ವೀಟ್ಗಳಲ್ಲಿ, ಪ್ರಿಯಾಂಕಾ ವಿರುದ್ಧ ವಾಗ್ದಾಳಿ ನಡೆಸಿದ್ದು, “ಉತ್ತರ ಪ್ರದೇಶದಲ್ಲಿ ರಾಜಕೀಯ ನಾಟಕದಲ್ಲಿ ತೊಡಗಿಸಿಕೊಳ್ಳುವ ಬದಲು, ರಾಜಸ್ಥಾನ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಮಕ್ಕಳನ್ನು ಕಳೆದುಕೊಂಡಿರುವ ಬಡ, ಪೀಡಿತ ತಾಯಂದಿರನ್ನು ಭೇಟಿಯಾಗಿದ್ದರೆ, ಆ ಕುಟುಂಬಗಳಿಗೆ ಸ್ವಲ್ಪ ಸಮಾಧಾನ ಸಿಗುತ್ತಿತ್ತು” ಎಂದು ಕಿಡಿ ಕಾರಿದೆ
“ಪ್ರಿಯಾಂಕಾ ಯಾರ ಬಗ್ಗೆಯೂ ಚಿಂತಿಸುತ್ತಿಲ್ಲ, ಯಾರ ಬಗ್ಗೆಯೂ ಸಹಾನುಭೂತಿ ಹೊಂದಿಲ್ಲ, ಸಾರ್ವಜನಿಕ ಸೇವೆಯ ಬದಲು, ಅವರು ಕೇವಲ ರಾಜಕೀಯವನ್ನು ಮಾಡುತ್ತಿದ್ದಾರೆ” ಎಂದು ಟ್ವೀಟ್ ಹೇಳಿದೆ. ಮತ್ತೊಂದು ಟ್ವೀಟ್, “ಕಾಂಗ್ರೆಸ್ ಸರ್ಕಾರ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಿರಾಸಕ್ತಿ, ಸೂಕ್ಷ್ಮತೆ ಮತ್ತು ಬೇಜವಾಬ್ದಾರಿ ವರ್ತನೆ ಮತ್ತು ಈ ವಿಷಯದಲ್ಲಿ ಮೌನವಾಗಿರುವುದು ವಿಷಾದನೀಯ” ಎಂದು ಹೇಳಿದ್ದಾರೆ.