ಪ್ರೀತಿಸಿ ಮದುವೆಯಾಗಿ 3 ದಿನಕ್ಕೆ ಕೈಕೊಟ್ಟ ಯುವಕ

ಪ್ರೀತಿಸಿ ಮದುವೆಯಾಗಿ 3 ದಿನಕ್ಕೆ ಕೈಕೊಟ್ಟ ಯುವಕ

ಹುಬ್ಬಳ್ಳಿ: ಈ ಪ್ರೀತಿ, ಪ್ರೇಮ ಅನ್ನೋದು ಬರೀ ಪುಸ್ತಕದ ಬದನೆಕಾಯಿ, ಇದು ಉಪ್ಪಿಯವರ ಡೈಲಾಗ. ಹೌದು ಈ ಡೈಲಾಗಿಗೆ ಒಂದು ಉದಾಹರಣೆ ಇಲ್ಲಿದೆ ನೋಡಿ. ನವಲಗುಂದ ತಾಲೂಕು ಜೆಡಿಎಸ್ ಪಕ್ಷದ ಮುಖಂಡರೊಬ್ಬರ  ಮಗನೊಬ್ಬ  ಯುವತಿಯನ್ನು ನಂಬ್ಬಿಸಿ, ಕಾಡಿಬೇಡಿ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದಾನೆ. ಬಳಿಕ ತಿರುಪತಿಗೆ ಕರೆದುಕೊಂಡು ಹೋಗಿ ಮದುವೆಯಾಗಿ 2 ದಿನ ಯುವತಿಯೊಂದಿಗೆ ಲಾಡ್ಜಿನಲ್ಲಿ ತಂಗಿದ್ದ ಆತ ಹುಬ್ಬಳ್ಳಿಯ ಬಸ್ ನಿಲ್ದಾಣದಲ್ಲಿ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆ.

ಇದರಿಂದ ಕಂಗಾಲಾಗಿರುವ ಯುವತಿ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ. ಪೊಲೀಸರಿಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಯುವಕನ ತಾಯಿ ರಾಜಕೀಯ ನಾಯಕಿಯಾಗಿದ್ದು, ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ನೊಂದ ಯುವತಿ ಕುಟುಂಬದವರೊಂದಿಗೆ ಪೊಲೀಸ್ ಠಾಣೆಗೆ ಹೋದರೂ ಪ್ರಯೋಜನವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos