ಬಿಜೆಪಿ ಉ.ಚು ಗೆ ಭರ್ಜರಿ ತಯಾರಿ

ಬಿಜೆಪಿ ಉ.ಚು ಗೆ ಭರ್ಜರಿ ತಯಾರಿ

ಬೆಂಗಳೂರು, ನ.06: ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ಡಿ. 5ರಂದು ಉಪಚುನಾವಣೆ ನಡೆಯಲಿದ್ದು ಬಿಜೆಪಿಯು ಉಪಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿದೆ. ಈಗಾಗಲೇ ಸಿಎಂ ಗೆ ಅನರ್ಹರ ಕ್ಷೇತ್ರಗಳಲ್ಲಿ ಭರ್ಜರಿ ಮತಬೇಟೆ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಮತ್ತು ಹೊಸಕೋಟೆ ಕ್ಷೇತ್ರಗಳಿಗೆ ಈಗಾಗಲೇ ಭೇಟಿ ನೀಡಿ ಪ್ರಚಾರ ನಡೆಸಿದ್ದಾರೆ. ನಾಳೆ ಹಿರೇಕೆರೂರು ಮತ್ತು ರಾಣಿಬೆನ್ನೂರು ಕ್ಷೇತ್ರಗಳಲ್ಲಿ ಅಬ್ಬರದ ಮತಪ್ರಚಾರದಲ್ಲಿ ಸಿಎಂ ಭಾಗಿಯಾಗಲಿದ್ದಾರೆ.

ಇತ್ತ ಸಂಘ ಪರಿವಾರವೂ ಸಹ ಪ್ರವಾಹಪೀಡಿತ ಭಾಗದ ಕ್ಷೇತ್ರಗಳ ಸ್ಥಿತಿಗತಿ ಅರಿಯಲು ಮುಂದಾಗಿದೆ. ನೆರೆ ಪ್ರದೇಶಗಳಲ್ಲಿ ಬಿಜೆಪಿ ಬಗ್ಗೆ ಜನರಿಗೆ ಯಾವ ಅಭಿಪ್ರಾಯವಿದೆ? ಬಿಜೆಪಿ ಅಭ್ಯರ್ಥಿಗಳಿಗೆ ನೆರೆಸಂತ್ರಸ್ತರು ಮತ ಹಾಕುತ್ತಾರಾ? ಸದ್ಯ ಮತದಾರರ ಒಲವು ಯಾರ ಪರ ಇದೆ? ಜನರ ಒಲವು ಗಿಟ್ಟಿಸಿಕೊಳ್ಳಲು ಏನು ಮಾಡಬೇಕು? ಈ ಬಗ್ಗೆ ಜನರ ಅಭಿಪ್ರಾಯ ಸಂಸಗ್ರಹಿಸಲು ಸಂಘ ಪರಿವಾರದ ಸದಸ್ಯರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

 

ಫ್ರೆಶ್ ನ್ಯೂಸ್

Latest Posts

Featured Videos