ಬೆಳಗಾವಿ, ಅ. 3 : ಪ್ರವಾಹದ ಅಬ್ಬರದಿಂದ ಜಲಚರ ಪ್ರಾಣಿಗಳು ಊರೊಳಗೆ ಪ್ರವೇಶಿಸುತ್ತಿದ್ದು, ಬಳ್ಳಾರಿ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ 9 ಅಡಿ ಉದ್ದದ ಹೆಬ್ಬಾವು ಸಿಕ್ಕಿದೆ.
ಗ್ರಾಮದ ಅಶೋಕ ಮಂಡು ಎಂಬವರು ಹೊಲದಲ್ಲಿ ಹೆಬ್ಬಾವು ಕಣ್ಣಿಗೆ ಬಿದ್ದಿದೆ. ಸುಮಾರು 35 ಕೆ.ಜಿ.ಗೂ ಹೆಚ್ಚು ತೂಕವುಳ್ಳ ಹೆಬ್ಬಾವು ಕಂಡು ಭಯಭೀತರಾಗಿದ್ದಾರೆ. ಹಾವು ಹಿಡಿಯುವ ತಜ್ಞರಾದ ಆನಂದ ಚಿಟ್ನಿ, ನಿರ್ಧರಾ ಚಿಟ್ನಿ ದಂಪತಿ ಬಂದು ಹೆಬ್ಬಾವು ರಕ್ಷಿಸಿದ್ದಾರೆ.