ಮೈಸೂರು, ಮಾ. 27, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಯ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಪ್ರತಾಪ್ ಸಿಂಹ ಇಂದಿನಿಂದ ಬಹಿರಂಗ ಪ್ರಚಾರ ಆರಂಭಿಸಲಿದ್ದಾರೆ.
ಹುಣಸೂರು ತಾಲೂಕಿನ ಗದ್ದಿಗೆ ಗ್ರಾಮದಿಂದ ಪ್ರತಾಪ್ ಸಿಂಹ ಅವರು ಪ್ರಚಾರ ಶುರು ಮಾಡಲಿದ್ದಾರೆ. ಪ್ರಚಾರಕ್ಕೂ ಮೊದಲು ಗದ್ದಿಗೆ ಪ್ರಸಿದ್ದ ದೇವಾಲಯ ಕೆಂಡಗಣೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಪ್ರಚಾರ ನಡೆಸಲಿದ್ದಾರೆ.
ಗದ್ದಿಗೆ, ಉದ್ದೂರು, ರತ್ನಪುರಿ ಸೇರಿದಂತೆ ಸುಮಾರು 14 ಹಳ್ಳಿಗಳಲ್ಲಿ ಇಂದು ಸಂಜೆ 6 ಗಂಟೆಯವರಿಗೆ ಪ್ರತಾಪ್ ಸಿಂಹ ಮತಯಾಚನೆ ಮಾಡಲಿದ್ದಾರೆ.