ಪ್ರಶಾಂತ್​ ಸಂಬರ್ಗಿಗೆ ಜೀವ ಬೆದರಿಕೆ! ಎಫ್​ಐಆರ್​ ದಾಖಲು

ಪ್ರಶಾಂತ್​ ಸಂಬರ್ಗಿಗೆ ಜೀವ ಬೆದರಿಕೆ! ಎಫ್​ಐಆರ್​ ದಾಖಲು

ಬೆಂಗಳೂರು: ಪ್ರಶಾಂತ್​ ಸಂಬರ್ಗಿ ಒಬ್ಬ ಸಾಮಾಜಿಕ ಹೋರಾಟಗಾರ ಹಾಗೂ ಕನ್ನಡ ಬಿಗ್‌ ಬಾಸ್‌ ಸೀಸನ್‌ 8 ಹಾಗೂ 9ರ ಸ್ಪರ್ಧಿಯಾಗಿದ್ದರು. ಪ್ರಶಾಂತ್​ ಸಂಬರ್ಗಿಯವರು ಬಿಗ್‌ ಬಾಸ್ಗೆ ಬರುವ ಮುಂಚೆ ಒಬ್ಬ ಹೋರಾಟಗಾರ ಅಂತ ಸ್ವಲ್ಪ ಜನರಿಗೆ ಅಷ್ಟೇ ಗೊತ್ತಿತ್ತು. ಆದರೆ ಇವರು ಬಿಗ್‌ ಬಾಸ್‌ ಬಂದ ಮೇಲೆ ಇಡೀ ಕರ್ನಾಟಕಕ್ಕೆ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದಾರೆ.

ರಾಮೇಶ್ವರಂ ಕೆಫೆ ಸ್ಫೋಟವನ್ನ ಖಂಡಿಸಿದ್ದ ಬಳಿಕ ತನಗೆ ಹಾಗೂ ತಮ್ಮ ಕುಟುಂಬ ಸದಸ್ಯರಿಗೆ ಅಪರಿಚಿತ ನಂಬರ್ ಗಳಿಂದ ಜೀವ ಬೆದರಿಕೆ ಸಂದೇಶಗಳನ್ನ ಕಳಿಸಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.ವಾಟ್ಸ್ಯಾಪ್​ ಹಾಗೂ ಇ-ಮೇಲ್​ ಮೂಲಕ ಬೆದರಿಕೆ ಹಾಕಲಾಗುತ್ತಿದೆ ಎಂದು ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ಪ್ರಶಾಂತ್ ಸಂಬರ್ಗಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.

ಮಾರ್ಚ್ 8ರಂದು ಐಟಿಪಿಎಲ್ ಮುಖ್ಯರಸ್ತೆಯ ದಿ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಭಯೋತ್ಪಾದಕ ಕೃತ್ಯವನ್ನ ಖಂಡಿಸಿದ್ದ ನಾನು ನಂತರ ಕೆಫೆಯ ಪುನರಾರಂಭಕ್ಕೂ ಹೋಗಿದ್ದೆ. ಈ ನಡುವೆ ವಿದೇಶದ ಮೊಬೈಲ್​ ಸಂಖ್ಯೆಗಳಿಂದ ಬೆದರಿಕೆ ಸಂದೇಶಗಳು ಬರಲಾರಂಭಿಸಿದ್ದವು. ಆರಂಭದಲ್ಲಿ ಅವುಗಳನ್ನ ನಿರ್ಲಕ್ಷಿಸಿದ್ದೆ. ಆದರೆ ನಂತರದ ದಿನಗಳಲ್ಲಿ ನನ್ನ ಕುಟುಂಬಸ್ಥರಿಗೂ ಬೆದರಿಕೆ ಸಂದೇಶಗಳು‌ ಬರಲಾರಂಭಿಸಿದ್ದು, ನನ್ನ ಮತ್ತು ಮಕ್ಕಳನ್ನು ಸಹ ಟಾರ್ಗೆಟ್ ಮಾಡಲಾಗುತ್ತಿದೆ. ಆದ್ದರಿಂದ ಸಂದೇಶ ಬಂದ ನಂಬರ್ ಗಳ ಮೂಲವನ್ನ ಪರಿಶೀಲಿಸಿದಾಗ ಅಮೆರಿಕ, ಕ್ರೊಯೇಷಿಯಾ ಮುಂತಾದ ದೇಶಗಳ ವಾಟ್ಸ್ಯಾಪ್ ಸಂಖ್ಯೆಗಳನ್ನು ಬಳಸಿರುವುದು ತಿಳಿದು ಬಂದಿದೆ. ಆದ್ದರಿಂದ ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ತಮಗೆ ರಕ್ಷಣೆ ನೀಡಬೇಕು ಎಂದು ಪ್ರಶಾಂತ್​ ಸಂಬರ್ಗಿಯವರು ತಮ್ಮ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos