ನಾಮಪತ್ರ ಸಲ್ಲಿಸಿದ ಬೆಂಗಳೂರು ಸೆಂಟ್ರಲ್ ನ ಸ್ವತಂತ್ರ ಅಭ್ಯರ್ಥಿ ಪ್ರಕಾಶ್ ರಾಜ್

ನಾಮಪತ್ರ ಸಲ್ಲಿಸಿದ ಬೆಂಗಳೂರು ಸೆಂಟ್ರಲ್ ನ ಸ್ವತಂತ್ರ ಅಭ್ಯರ್ಥಿ ಪ್ರಕಾಶ್ ರಾಜ್

ಬೆಂಗಳೂರು, ಮಾ.22, ನ್ಯೂಸ್ ಎಕ್ಸ್ ಪ್ರೆಸ್: ನಗರದ ಸೆಂಟ್ರಲ್ ನ ಸ್ವತಂತ್ರ ಅಭ್ಯರ್ಥಿ ಪ್ರಕಾಶ್ ರಾಜ್ ಅವರಿಂದು ನಾಮಪತ್ರ ಸಲ್ಲಿಸಿದರು.

ಅಲಸೂರಿನ ಗಣೇಶನ ದೇವಾಲಯ, ದರ್ಗಾ ಹಾಗೂ ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಕಾಶ್ ರಾಜ್ ಅವರು ಆಸ್ಟಿನ್ ಟೌನ್ ನಿಂದ ಬೈಕ್ ರ್ಯಾಲಿ ಆರಂಭಿಸಿ ಬೆಂಗಳೂರಿನ ಹಡ್ಸನ್ ವೃತ್ತದ ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಹಲವು ಜಾನಪದ ಕಲಾ ತಂಡಗಳು, ಸಾವಿರಾರು ಬೆಂಬಲಿಗರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

ಪತ್ನಿ ಪೋನಿ ವರ್ಮಾ ಅವರ ಮಕ್ಕಳ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ ಬಹುಭಾಷಾ ನಟ, ಸಮಾಜ ಪರ ಚಿಂತಕ ಪ್ರಕಾಶ್ ರಾಜ್ ಅವರು ನಂತರ ಆಸ್ಟಿನ್ ಟೌನ್ ಮೈದಾನದಲ್ಲಿ ಆಯೋಜಿಸಿರುವ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos