ಪ್ರಕಾಶ್ ರೈಗೆ ಉಪ್ಪಿ ಆಫರ್

ಪ್ರಕಾಶ್ ರೈಗೆ ಉಪ್ಪಿ ಆಫರ್

ಬೆಂಗಳೂರು: ‘ರಿಯಲ್ ಸ್ಟಾರ್’ ಉಪ್ಪಿ ಉತ್ತಮ ಪ್ರಜಾಕೀಯ ಪಕ್ಷದಿಂದ ರಾಜಕಾರಣದ ಪ್ರಯಾಣ ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ಪ್ರಣಾಳಿಕೆಯ ಮೂಲಕ ಉಪ್ಪಿ ಜನರ ಗಮನ ಸೆಳೆದಿದ್ದರು. ಇದೀಗ ಪ್ರಣಾಳಿಕೆ-2 ರಿಲೀಸ್ ಮಾಡೋಕೆ ಮುಂದಾಗಿದ್ದಾರೆ. ಅಲ್ಲದೇ ಇದೊಂದು ಪ್ರಜೆಗಳಿಗೋಸ್ಕರ ಇರುವ ಪ್ರಣಾಳಿಕೆ ಅಂತಾ ತಿಳಿಸಿದ್ದಾರೆ. ಅಲ್ಲದೇ ನಟ ಪ್ರಕಾಶ್​ ರೈಗೂ ಪಕ್ಷದಲ್ಲಿ ಆಫರ್ ಕೊಟ್ಟಿದ್ದಾರೆ.

‘ಹಲವು ಪಕ್ಷಗಳು ನಾವು ಅದು ಮಾಡ್ತೀವಿ, ಇದು ಮಾಡ್ತೀವಿ ಅಂತ ದೊಡ್ಡ ದೊಡ್ಡ ಆಶ್ವಾಸನೆ ಕೊಡ್ತಾರೆ. ಇಂಥಾ ಪ್ರಣಾಳಿಕೆಗಳು ತಪ್ಪು. ಆದರೆ ನಮ್ಮ ಪ್ರಣಾಳಿಕೆ ಜನರ ಹತ್ತಿರ ಹೋಗಿ ಏನು ಸಮಸ್ಯೆ..? ಏನು ಪರಿಹಾರ ಆಗಬೇಕು..? ಅಂತಾ ಜನರ ಬಳಿಯೇ ಸಿದ್ಧಪಡಿಸಿರೋ ಪ್ರಣಾಳಿಕೆ ನಮ್ಮದು. ಸೆಲೆಕ್ಷನ್, ಎಲೆಕ್ಷನ್, ಕಲೆಕ್ಷನ್, ರಿಜೆಕ್ಷನ್, ಪ್ರಮೋಷನ್… ಈ ಐದು ತತ್ವಗಳ ಮೇಲೆ ನಮ್ಮ ಪ್ರಣಾಳಿಕೆ ಸಿದ್ಧವಾಗಿದೆ’ ಅಂತಾ ತಿಳಿಸಿದ್ದಾರೆ.

‘ನಾವು ವಿಧಾನಸಭೆ ಚುನಾವಣೆಯಲ್ಲೂ ಅಷ್ಟೆ ನಮ್ಮ ಪಕ್ಷಕ್ಕೆ ಮೆಜಾರಿಟಿ ಸಿಗೋವರೆಗೂ ನಾವು ಯಾರ ಜೊತೆಗೂ ಕಾಂಪ್ರಮೈಸ್ ಆಗಲ್ಲ. ನಾವು ಎಲೆಕ್ಷನ್ ಗೆ ನಿಲ್ಲೋ ಚಿಂತನೆ ನಡೆಯುತ್ತಿದೆ. ಜನರ ಆಯ್ಕೆಯಂತೆಯೇ ಅಭ್ಯರ್ಥಿಗಳ ಆಯ್ಕೆ ಮಾಡ್ತೀವಿ. ಹದಿನೈದು ದಿನಗಳಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ. ನಡುವೆ ಸಂಪರ್ಕದ ಸೇತುವೆಯಾಗಿ ಕೆಲಸ ಮಾಡಲಿದೆ. ಪ್ರಕಾಶ್ ರಾಜ್ ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ. ಅವರನ್ನ ಮೊದಲು ಜನರ ಮುಂದೆ ಇಡ್ತೀವಿ, ಪ್ರಕಾಶ್ ರಾಜ್ ಜನರಿಗಾಗಿ ಏನ್ ಮಾಡ್ತೀವಿ ಅಂತಾ ಯೋಜನೆ ಕೊಟ್ಟರೇ ಖಂಡಿತ ಸ್ವಾಗತ ಅಂತಾ ಉತ್ತರಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos