ಪೌರ ಕಾರ್ಮಿಕರ ಕೆಲಸಕ್ಕೆ ಗೌರವ ಬೇಕಾಗಿದೆ, ನಿಮ್ಮ ಡ್ರಾಮಾ ಬೇಕಾಗಿಲ್ಲ: ಪ್ರಕಾಶ್ ರೈ

ಪೌರ ಕಾರ್ಮಿಕರ ಕೆಲಸಕ್ಕೆ ಗೌರವ ಬೇಕಾಗಿದೆ, ನಿಮ್ಮ ಡ್ರಾಮಾ ಬೇಕಾಗಿಲ್ಲ: ಪ್ರಕಾಶ್ ರೈ

ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಆಯೋಜಿಸಿದ್ದ ಮಹಾಕುಂಭ ಮೇಳವನ್ನು ಯಶಸ್ವಿಯಾದ ಹಿನ್ನೆಲೆ ಪ್ರಧಾನಿ ಮೋದಿ ನಿನ್ನೆ ಪೌರ ಕಾರ್ಮಿಕರಿಗೆ ಅಭಿನಂದಿಸಿದರು ಮತ್ತು ಪ್ರಯಾಗ್ ರಾಜ್ನಲ್ಲಿ ಸ್ವಚ್ಛತೆ ಕಾಪಾಡಿದಕ್ಕೆ ಪೌರ ಕಾರ್ಮಿಕರ ಪಾದಪೂಜೆ ಮಾಡಿದ್ದರು.

ಈ ಬಗ್ಗೆ ಸಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿ ಅವರ ಈ ನಡೆ ಒಂದು ಕಡೆ ಮೆಚ್ಚುಗೆಗೆ ಪಾತ್ರವಾದರು ಮತ್ತೊಂದು ಕಡೆ ಟೀಕೆಗೆ ಗುರಿಯಾಗಿದೆ.

ಇದೀಗ ಈ ಬಗ್ಗೆ ನಟ ಹಾಗೂ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಲೋಕಸಭಾ ಅಭ್ಯರ್ಥಿಯಾದ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವಿಟರ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಪ್ರಕಾಶ್ ರಾಜ್, ಮಾನ್ಯ ಪ್ರಧಾನಿಗಳೇ ಸಫಾರಿ ಕರ್ಮಚಾರಿಗಳ ಕೆಲಸಕ್ಕೆ ಗೌರವ ಬೇಕಾಗಿದೆ. ಕೆಲಸದ ಭದ್ರತೆ ಬೇಕಾಗಿದೆ. ಅವರ ಮಕ್ಕಳ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ. ನಿಮ್ಮ ಡ್ರಾಮಾ ಅವರಿಗೆ ಬೇಕಾಗಿಲ್ಲ ಎಂದೇಳಿ ಪ್ರಧಾನಿ ಮೋದಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos