ನವದೆಹಲಿ, ಮೇ. 18, ನ್ಯೂಸ್ ಎಕ್ಸ್ ಪ್ರೆಸ್ : ಮಹಾತ್ಮ ಗಾಂಧಿ ಹಂತಕ ನಾಥೂರಾಂ ಗೋಡ್ಸೆಯನ್ನು ‘ದೇಶಭಕ್ತ’ ಎಂದು ಬಣ್ಣಿಸಿದ ಬಿಜೆಪಿಯ ಭೋಪಾಲ್ ಅಭ್ಯರ್ಥಿ ಹಾಗೂ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಠಾಕೂರ್ ವಿರುದ್ಧ ನೋಬೆಲ್ ಶಾಂತಿ ಪುರಸ್ಕಾರ ವಿಜೇತ ಕೈಲಾಶ್ ಸತ್ಯಾರ್ಥಿಕಿಡಿ ಕಾರಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ”ಗೋಡ್ಸೆ ಗಾಂಧೀಜಿಯ ದೇಹವನ್ನು ಹತ್ಯೆಗೈದ, ಆದರೆ ಪ್ರಜ್ಞಾರಂತಹ ಜನರು ಗಾಂಧೀಜಿಯ ಆತ್ಮವನ್ನು ಹಾಗೂ ಅಹಿಂಸೆ, ಶಾಂತಿ ಮತ್ತು ಸಹಿಷ್ಣುತೆಯನ್ನೇ ಕೊಲ್ಲುತ್ತಿದ್ದಾರೆ. ಗಾಂಧೀಜಿ ಪಕ್ಷ ಮತ್ತು ರಾಜಕೀಯಕ್ಕಿಂತಲೂ ಮೇಲೇರಿದ್ದರು. ಬಿಜೆಪಿಯ ಭೋಪಾಲ್ ಅಭ್ಯರ್ಥಿ ಪ್ರಜ್ಞಾ ಠಾಕೂರ್ ಅವರನ್ನು ಬಿಜೆಪಿಯಿಂದ ಕೈ ಬಿಟ್ಟು ಪಕ್ಷದಿಂದ ಕೈಬಿಟ್ಟು ಬಿಜೆಪಿ ರಾಜಧರ್ಮ ಪಾಲಿಸಬೇಕು” ಎಂದು ಸತ್ಯಾರ್ಥಿ ಟ್ವೀಟ್ ಮಾಡಿದ್ದಾರೆ.
.