ಪ್ರಭಾವಿ ನಾಯಕರ ಆಣೆ ಪಟಾಕಿ ಠುಸ್ !

ಪ್ರಭಾವಿ ನಾಯಕರ ಆಣೆ ಪಟಾಕಿ ಠುಸ್ !

ಮೈಸೂರು, . 17 : ಸಾ.ರಾ ಮಹೇಶ್ ಮತ್ತು ವಿಶ್ವನಾಥ್ ಮೈಸೂರು ಭಾಗದ ಪ್ರಭಾವಿ ನಾಯಕರು. ಇವರಿಬ್ಬರ ಆರೋಪ ಪ್ರತ್ಯಾರೋಪಗಳು ಇಂದು ಬೆಟ್ಟದ ಮೇಲಿನ ಚಾಮುಂಡಿ ತಾಯಿ ಸಾಕ್ಷಿ.

ಅನರ್ಹ ಶಾಸಕ  ಎಚ್.ವಿಶ್ವನಾಥ್, ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ನಡುವೆ ಆಣೆ – ಪ್ರಮಾಣ ರಾಜಕೀಯ ಮತ್ತೊಂದು ಮಜಲು ತಲುಪಿದೆ. ಆಣೆ ಪ್ರಮಾಣ ಮಾಡಲು ಗುರುವಾರ ಚಾಮುಂಡಿ ಬೆಟ್ಟಕ್ಕೆ ಬರಬೇಕೆಂದು ವಿಶ್ವನಾಥ್ ಸಾ.ರಾ. ಮಹೇಶ್ ಗೆ ಸವಾಲು ಹಾಕಿದ್ದರು. ಆದರೆ, ಚಾಮುಂಡಿ ಬೆಟ್ಟಕ್ಕೆ ಬಂದ ಬಳಿಕ ಉಲ್ಟಾ ಹೊಡೆದ ಅನರ್ಹ ಶಾಸಕ ವಿಶ್ವನಾಥ್ ”ನಾನು ಇಲ್ಲಿಗೆ ಆಣೆ ಪ್ರಮಾಣ ಮಾಡಲು ಬಂದಿಲ್ಲ. ನನಗೆ ಹಣ ಕೊಟ್ಟವರನ್ನು ನೋಡಲು ಕಾಯುತ್ತಿದ್ದೇನೆ” ಎಂದು ಹೇಳಿದರು.

ಕಣ್ಣೀರಿಟ್ಟ ಸಾ.ರಾ. ಮಹೇಶ್

ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಸಾ.ರಾ. ಮಹೇಶ್ ಕಣ್ಣೀರಿಟ್ಟರು. ಅಲ್ಲದೆ, ವಿಶ್ವನಾಥ್ ”ನನ್ನ ಮೇಲೆ ವೈಯಕ್ತಿಕ ಆರೋಪ ಮಾಡಿದ್ದಾರೆ. ಆರೋಪ ಸಾಬೀತುಪಡಿಸಿದ್ರೆ ನಾನು ಕ್ಷಮೆಯಾಚಿಸುವೆ” ಎಂದು ಸಾ.ರಾ.ಮಹೇಶ್ ಹೇಳಿದ್ದಾರೆ.  ಚಾಮುಂಡೇಶ್ವರಿ ದೇವಿಯ ಮುಂದೆ ಹಣ ಕೊಟ್ಟವರನ್ನು ಕರೆತಂದು ಪ್ರಮಾಣ ಮಾಡಲಿ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos