ವಿದ್ಯುತ್ ಸ್ಪರ್ಶ : ಮಹಿಳೆ ಸಾವು

ವಿದ್ಯುತ್ ಸ್ಪರ್ಶ : ಮಹಿಳೆ ಸಾವು

ಚಾಮರಾಜನಗರ, ಅ. 28 : ಬಹಿರ್ದೆಸೆಗೆಂದು ತೆರಳಿದ್ದ ವೇಳೆ ಮಹಿಳೆಯೊಬ್ಬರು ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿರುವ ಪ್ರಕರಣ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ನಡೆದಿದೆ .
ಸಣ್ಣಮ್ಮ ಮೃತ ದುರ್ದೈವಿ. ಗ್ರಾಮದ ಶಿವಶಂಕರ್ ಎಂಬುವರ ಜಮೀನಿನಲ್ಲಿ ಕೂಲಿ ಕೆಲಸಕ್ಕೆಂದು ಹೋಗಿದ್ದರು. ಜಮೀನಿನ ಸುತ್ತಲೂ ವಿದ್ಯುತ್ ಸೋಲಾರ್ ಬಿಡಲಾಗಿತ್ತು. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಹಿಳೆ ಬಹಿರ್ದೆಸೆಗೆ ತೆರಳಿದ್ದಾರೆ.
ಬಹಿರ್ದೆಸೆ ಮುಗಿಸಿ ಮತ್ತೆ ಹಿಂದಿರುಗುವ ವೇಳೆ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಅಸ್ವಸ್ಥಗೊಂಡರು. ಈ ವೇಳೆ ಅಸ್ವಸ್ಥರಾದ ಮಹಿಳೆ ಸಣ್ಣಮ್ಮ ಅವರನ್ನು ಸಂತೇಮರಹಳ್ಳಿ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಕರೆದೊಯ್ಯಲಾಯಿತು. ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರ ಸಂಬಂಧಿಕರಾದ ತಾಯಮ್ಮ ಕುದೇರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos