ಹೊಸಕೋಟೆ, ನ. 05: ಒಬ್ಬರು ಜನ್ಮ ಕೊಟ್ಟವರು, ಮತ್ತೊಂದು ಪಕ್ಷ ಇದೀಗ ಯಾರೋ ಒಬ್ಬರ ಪಿತ್ತೂರಿ, ರಾಜಕೀಯ ಕುತಂತ್ರದಿಂದ ಪಕ್ಷದ ತಾಯಿಯಿಂದ ನಮ್ಮನ್ನು ದೂರ ಮಾಡುತ್ತಿದ್ದಾರೆ ನಮಗೆ ಇವತ್ತು ತುಂಬಾ ನೋವಾಗುತ್ತಿದೆ ಎಂದು ಬಿಜೆಪಿಯ ಯುವ ನಾಯಕ ಶರತ್ ಬಚ್ಚೇಗೌಡ ಅವರು ತಿಳಿಸಿದ್ದಾರೆ.
ಬಿಜೆಪಿ ಪಕ್ಷದ ಕಾರ್ಯಕ್ರಮಗಳನ್ನು ಕಾಲಿನಲ್ಲಿ ತೋರಿಸಿದರೆ ನಾವು ಅದನ್ನ ಕೈಯಲ್ಲಿ ಮಾಡುತ್ತಾ ಇದ್ವಿ. ಹೊಸಕೋಟೆ ಕ್ಷೇತ್ರದಲ್ಲಿ ನಾವು ಮಾಡಿದ ರೀತಿ ಇನ್ಯಾರು ಮಾಡ್ತಾ ಇರ್ಲಿಲ್ಲ. ಈಗ ಯಾರೋ ಒಬ್ಬರು ಪಾರ್ಟಿಗೆ ಬಂದು ನಮ್ಮನ್ನು ದೂರ ಮಾಡ್ತಾ ಇದ್ದಾರೆ. ವೇದಿಕೆ ಮೇಲೆ ಸಿಎಂ ಕೊಟ್ಟ ಆಶ್ವಾಸನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ.
15 ವರ್ಷ ಪಾರ್ಟಿಗಾಗಿ ನಾವು ಕೋರ್ಟ್, ಕಛೇರಿಗಳಿಗೆ ಅಲೆದಾಟ ನಡೆಸಿದ್ದೀವಿ ನಮಗೆ ಯಾರು ತೊಂದರೆ ಕೊಟ್ರೂ ಅವರಿಗೆ ವೇದಿಕೆ ಮೇಲೆ ಗೌರವ, ಅಭಿನಂದನೆ ಮಾಡಿದ್ದೇವೆ. 15 ವರ್ಷ ಪಾರ್ಟಿ ಗೆ ದುಡಿದಿದ್ದೇನೆ.
ಯಾಕೆ ನಮಗೂ ಗೆಲ್ಲುವ ಅರ್ಹತೆ ಇಲ್ವಾ..? ನಮಗೂ ಹಿರಿಯರು ಆಶಿರ್ವಾದ ಮಾಡಬಾರದಾ, ಅದಕ್ಕೆ ಅರ್ಹನಲ್ವಾ ತಾಯಿ ಪಕ್ಷ, ತಂದೆ ಬಚ್ಚೇಗೌಡರು ಇಬ್ಬರಿಂದಲೂ ದೂರ ಆಗಿ ರಾಜಕೀಯವಾಗಿ ತಬ್ಬಲಿ ಆಗಿದ್ದೇನೆ. ನಮ್ಮ ಕಾರ್ಯಕರ್ತರೊಂದಿಗೆ ಮಾತನಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಉಪಚುನಾವಣೆಯಲ್ಲಿ ನೂರಕ್ಕೆ ನೂರು ಸ್ಪರ್ಧೆ ಮಾಡುತ್ತೇನೆ ಎಂದು ಶರತ್ ಬಚ್ಚೇಗೌಡ ಅವರು ತಾವರೆಕೆರೆ ಗ್ರಾಮ ಪಂಚಾಯಿತಿಯ ಹೈಮಾಸ್ಕ್ ಲೈಟ್ ಉದ್ಘಾಟನೆ ವೇಳೆ ಹೇಳಿಕೆ ನೀಡಿದ್ದಾರೆ.