ಜಾಲಹಳ್ಳಿ, ಆ. 13: ನಗರದಲ್ಲಿ ಭರತ್ ಅಲಿಯಾಸ್ ಬಾಬಿ (25)ಕಾಲಿಗೆ ಗುಂಡು ಹಾರಿಸಿದ ಪೊಲೀಸರು. ಜಾಲಹಳ್ಳಿ ಪ್ರೆಸ್ಟೇಜ್ ಅಪಾರ್ಟ್ಮೆಂಟ್ ಬಳಿ ಈ ಘಟನೆ. ಇತ್ತಿಚೆಗಷ್ಟೆ ರೌಡಿ ವೆಂಕಟೇಶ್ ಅಲಿಯಾಸ್ ಕಾಡು ಮೇಲೆ ಅಟ್ಯಾಕ್ ಮಾಡಿದ್ದ ಘಟನೆಯಲ್ಲಿ ರೌಡಿ ವೆಂಕಟೇಶ್ ಗಂಭೀರವಾಗಿ ಗಾಯಗೊಂಡಿದ್ದ. ಈ ಸಂಬಂಧ ನಂದಿನಿಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಭರತ್ ಬಂಧಿಸಲು ತೆರಳಿದ್ದ ಪಿಎಸ್ ಐ ಲಕ್ಷ್ಮಣ್ ಅಂಡ್ ಟೀಮ್ ಜಾಲಹಳ್ಳಿ ಪ್ರೆಸ್ಟೇಜ್ ಅಪಾರ್ಟ್ಮೆಂಟ್ ಬಳಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಪೊಲೀಸರು ಪಿಎಸ್ ಐ ಲಕ್ಷ್ಮಣ್ ಗೆ ಭರತ್ ಹಿಡಿಯಲು ಹೋದಾಗ ಹಲ್ಲೆ ಮಾಡಿ ಪರಾರಿಯಾಗಲ್ಲೂ ಯತ್ನಿಸಿದಾಗ ಗುಂಡಿನ ದಾಳಿಯಲ್ಲಿ ಫೈರ್ ಮಾಡಿ ಎಚ್ಚರಿಕೆ ನೀಡಿದ್ದ ಪಿಎಸ್ ಐ ಲಕ್ಷ್ಮಣ್. ಆದರೂ ಆರೋಪಿ ಭರತ್ ಪರಾರಿಯಾಗಲ್ಲೂ ಯತ್ನಿಸಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ರೌಡಿ ಭರತ್ ಬಲಗಾಲಿಗೆ ಗುಂಡು ಹಾರಿಸಿದ ಪಿಎಸ್ ಐ ನಂದಿನಿ ಲೇಔಟ್ ಪಿಎಸ್ ಐ ಲಕ್ಷ್ಮಣ್ ರಿಂದ ಭರತ್ ಬಲಗಾಲಿಗೆ ಗುಂಡು ಹಾರಿಸಿ ಆರೋಪಿ ಬಂಧನ ಗಾಯಗೊಂಡಿರುವ ರೌಡಿ ಭರತ್ ಆಸ್ಪತ್ರೆಗೆ ದಾಖಲಿಸಿದ. ಪೊಲೀಸರು ಲಕ್ಷ್ಮಣ್ ಹಾಗೂ ಪೇದೆ ಉಮೇಶ್ ಗೆ ಗಾಯಾವಾಗಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.