ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಮಾರ್ಚ್ 8-10 ವರೆಗೆ
ರಾಯಚೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು “ಹೊಸ ಶತಮಾನದ ಯುವಕಾವ್ಯ” ಕುರಿತಂತೆ ಕನ್ನಡದಿಂದ ಉರ್ದು, ಮತ್ತು ಉರ್ದುವಿನಿಂದ ಕನ್ನಡಕ್ಕೆ ಕವಿತೆಗಳ ಅನುವಾದ ಕಮ್ಮಟವನ್ನು ಆಯೋಜಿಸಿದೆ.
ಈ ಕಮ್ಮಟದಲ್ಲಿ 40 ಅನುವಾದಕರು ಮಾತ್ರ ಭಾಗವಹಿಸಲು ಅವಕಾಶವಿದೆ. ನಾಡಿನ ಹಿರಿಯ ಚಿಂತಕರಾದ ಡಾ.ರಹಮತ್ ತರೀಕೆರೆಯವರ ನಿರ್ದೇಶನದಲ್ಲಿ ಈ ಕಮ್ಮಟವು ಮಾರ್ಚ್ ತಿಂಗಳ 8,9 ಮತ್ತು 10ರಂದು ಮೂರು ದಿನಗಳ ಕಾಲ ರಾಯಚೂರಿನಲ್ಲಿ ನಡೆಯಲಿದೆ.
ಈ ಕಮ್ಮಟದಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತ ಅನುವಾದಕರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಭಾಗವಹಿಸಿದ ಕಮ್ಮಟಾರ್ಥಿಗಳಿಗೆ ಪ್ರಾಧಿಕಾರವು ವಾಸ್ತವಿಕ ಪ್ರಮಾಣವೆಚ್ಚ ಹಾಗೂ ಪ್ರಮಾಣ ಪತ್ರಗಳನ್ನು ನೀಡಲಿದೆ. ಈ ಕಮ್ಮಟದಲ್ಲಿ ಅನುವಾದಗೊಂಡ ಉರ್ದು ಮತ್ತು ಕನ್ನಡ ಕವಿತೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಉದ್ದೇಶವನ್ನು ಪ್ರಾಧಿಕಾರವು ಹೊಂದಿದೆ.
ಉರ್ದು ಅಥವಾ ಕನ್ನಡ ಭಾಷೆಯ ಅನುವಾದದಲ್ಲಿ ಆಸಕ್ತಿ ಇರುವ, ಅನುಭವವಿರುವ ಅಥವಾ ಈ ಎರಡೂ ಭಾಷೆಗಳನ್ನು ಚೆನ್ನಾಗಿ ಬಲ್ಲ ಆಸಕ್ತರು ತಮ್ಮ ಸ್ವವಿವರಗಳೊಂದಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಜ್ಞಾನಭಾರತಿ, ಮಲ್ಲತ್ತಹಳ್ಳಿ, ಬೆಂಗಳೂರು,560056 ಈ ವಿಳಾಸಕ್ಕೆ ಫೆಬ್ರುವರಿ 18 ನೇ ತಾರೀಖಿನ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಫೋನ್ ಸಂಖ್ಯೆ 7892679105 ಗೆ ಸಂಪರ್ಕಿಸಬಹುದು ಎಂದು ಕುವೆಂಪು
ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರು ಹಾಗೂ ಅನುವಾದ ಕಮ್ಮಟದ ಸಂಚಾಲಕರಾದ ಬಿ.ಪೀರ್ ಬಾಷ
ತಿಳಿಸಿದ್ದಾರೆ.