ನನ್ನನ್ನು ಬಾಂಬೆಗೆ ಕಳುಹಿಸಬಡಿ ರವಿ ಪೂಜಾರಿ..!

ನನ್ನನ್ನು ಬಾಂಬೆಗೆ ಕಳುಹಿಸಬಡಿ ರವಿ ಪೂಜಾರಿ..!

ಬೆಂಗಳೂರು, ಫೆ. 28: ಭೂಗತ ಪಾತಕಿ ರವಿ ಪೂಜಾರಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಸಿಸಿಬಿ ತಂಡ, ಭೂಗತ ಲೋಕದಲ್ಲಿ ಈತ ಹೊಂದಿರುವ ನಂಟಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ ಎನ್ನಲಾಗಿದೆ.

ಗ್ಯಾಂಗ್ಸ್ಟರ್ ರವಿ ಪೂಜಾರಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆ ವೇಳೆ ರವಿ ಪೂಜಾರಿ ಕಣ್ಣೀರಿಟ್ಟಿದ್ದಾನೆ ಎನ್ನಲಾಗಿದೆ.

ಪೊಲೀಸರು ಗ್ಯಾಂಗ್ಸ್ಟರ್ ರವಿ ಪೂಜಾರಿಯ ವಿಚಾರಣೆ ಮಾಡಿದ್ದಾರೆ, ಈ ವೇಳೆ ರವಿ ಪೂಜಾರಿ ತನಗೆ ಸಾವಿನ ಭಯ ಇರೋದಾಗಿ ಹೇಳಿ ಕಣ್ಣೀರಿಟ್ಟಿದ್ದಾನೆ. ನಿಮ್ಮ ಕಾಲಿ ಬೀಳ್ತೀನಿ, ನನ್ನನ್ನ ಬಾಂಬೆ ಪೊಲೀಸರಿಗೆ ಕೊಡಬೇಡಿ. ಅಲ್ಲಿಗೆ ಕಳಿಸಿದರೆ ನನ್ನನ್ನ ಕೊಲೆ ಮಾಡಿಬಿಡ್ತಾರೆ, ಬಾಂಬೆಯಲ್ಲಿ ಸಿಕ್ಕ ಸಿಕ್ಕ ಹುಡುಗರಿಗೆ ಹೊಡೆದಿದ್ದೆ.. ಇಂದು ಅವರು ನನ್ನನ್ನ ಬಿಡಲ್ಲ, ಅಂತ ರವಿ ಪೂಜಾರಿ ಅಳಲು ತೋಡಿಕೊಂಡಿದ್ದಾನಂತೆ.

ಇನ್ನು ತನ್ನ ಹೆಂಡತಿ ಮಕ್ಕಳನ್ನೂ ನೆನೆದು ರವಿ ಪೂಜಾರಿ ಕಣ್ಣೀರು ಹಾಕಿದ್ದಾನೆ ಎನ್ನಲಾಗಿದೆ. ಇನ್ನು 2007 ರ ಶಭನಂ ಜ್ಯುವೆಲರ್ಸ್ ಅಟ್ಯಾಕ್ ಬಗ್ಗೆ ಕೂಡ ರವಿ ಪೂಜಾರಿ ಮರುಕ ಪಟ್ಟಿದ್ದು, ಆ ಹೆಣ್ಣುಮಗಳ ಮೇಲೆ ಗುಂಡು ಹಾರಿಸಬಾರದಿತ್ತು. ಆ ಘಟನೆ ಅಂದಿನಿಂದಲೂ ನನಗೆ ಮಾನಸಿಕವಾಗಿ ಹಿಂಸಿಸುತ್ತಿದೆ. ಹೆಣ್ಣುಮಗಳ ಹತ್ಯೆ ನನ್ನ ಮನಸ್ಸಲ್ಲಿ ಆಗಾಗ ನೆನಪಿಗೆ ಬಂದು ಪೀಡಿಸುತ್ತದೆ ಎಂದು ಸಿಸಿಬಿ ಪೊಲೀಸರ ವಿಚಾರಣೆ ವೇಳೆ ರವಿ ಪೂಜಾರಿ ಹೇಳಿಕೊಂಡಿದ್ದಾನಂತೆ.

 

ಫ್ರೆಶ್ ನ್ಯೂಸ್

Latest Posts

Featured Videos