ಮಾ.19, ನ್ಯೂಸ್ ಎಕ್ಸ್ ಪ್ರೆಸ್ : ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಭರ್ಜರಿ ಪ್ರಚಾರ ಶುರು ಮಾಡಿದ್ದಾರೆ. ಪ್ರಚಾರದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಬೈಕ್ಗಳಿಗೆ ಪೆಟ್ರೋಲ್ ಭಾಗ್ಯ ನೀಡಲಾಗಿತ್ತು. ಬೈಕ್ ರ್ಯಾಲಿಯಲ್ಲಿ ಪಾಲ್ಗೊಳ್ಳುವವರಿಗೆ 100 ರೂಪಾಯಿ ಬೆಲೆಯ ಪೆಟ್ರೋಲ್ ಟೋಕನ್ ವಿತರಣೆ ಮಾಡಲಾಗಿತ್ತು. ಟೋಕನ್ ಪಡೆದ ಕಾರ್ಯಕರ್ತರು ಹಲಗೂರು ಹೊರವಲಯದ ಇಂಡಿಯನ್ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಪಡೆಯುತ್ತಿದ್ದ ದೃಶ್ಯ ಕಂಡು ಬಂದಿತು. ಪೆಟ್ರೋಲ್ ಬಂಕ್ನಲ್ಲಿ ಸಾಲು ಸಾಲು ಬೈಕ್ಗಳು ನಿಂತಿದ್ದವು. ಟೋಕನ್ ನೀಡಿ ಕಾರ್ಯಕರ್ತರು ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದರು.