ಡೀಸೆಲ್ ತುಂಬಿಕೊಳ್ಳಲು ಬಕೆಟ್ ಹಿಡಿದ ಜನ

ಡೀಸೆಲ್ ತುಂಬಿಕೊಳ್ಳಲು ಬಕೆಟ್ ಹಿಡಿದ ಜನ

ಹುಬ್ಬಳ್ಳಿ, ಡಿ. 3: ಹುಬ್ಬಳ್ಳಿ-ಬೆಂಗಳೂರು ಪ್ಯಾಸೆಂಬರ್ ರೈಲಿನ ಇಂಜಿನ್’ನಲ್ಲಿ ಇಂಧನ ಸೋರಿಕೆಯಿಂದ ಬೆಂಗಳೂರಿಗೆ ಹೊರಡುವ ರೈಲು ಸವಣೂರು ತಾಲೂಕಿನ ಯಲವಿಗೆ ರೈಲ್ವೇ ನಿಲ್ದಾಣದಲ್ಲಿಯೇ ನಿಂತಿಕೊಂಡ ಪರಿಮಾಮ, ಡೀಸೆಲ್ ತುಂಬಿಕೊಳ್ಳಲು ಜನರು ಮುಗಿಬಿದ್ದದ್ದು ಕಂಡು ಬಂದಿತು.

ಇಂದು ಬೆಳಿಗ್ಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಡುವ ರೈಲಿನ ಎಂಜಿನ್ ನಲ್ಲಿ ಇಂಧನ ಸೋರಿಕೆ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ರೈಲನ್ನು ಯಲವಿಗಿಯಲ್ಲಿಯೇ ನಿಲ್ಲಿಸಲಾಗಿತ್ತು.

ಇಂಧನ ಸೋರಿಕೆಯನ್ನು ಗಮನಿಸಿದ ಸಾರ್ವಜನಿಕರು ಬಕೆಟ್ ಹಾಗೂ ಕೊಡಗಳನ್ನು ಹಿಡಿದು ಡೀಸೆಲ್ ತುಂಬಿಸಿಕೊಳ್ಳಲು ಮುಗಿ ಬಿದ್ದರು. ಇದರ ಪರಣಾಮ ಸಂಚಾರ ಕೆಲ ಕಾಲ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಗಿತ್ತು.

 

ಫ್ರೆಶ್ ನ್ಯೂಸ್

Latest Posts

Featured Videos