ಯುವಕನನ್ನು ರಕ್ಷಿಸಿದ ಜನ ನಾಯಕರು

ಯುವಕನನ್ನು ರಕ್ಷಿಸಿದ ಜನ ನಾಯಕರು

ಮಂಡ್ಯ, ನ. 11 : ನಾಗಮಂಗಲದ ಬಿಂಡೇನಹಳ್ಳಿ ಕೆರೆಯಲ್ಲಿ ಈಜಲು ಹೋದ ಯುವಕ ಈಜು ಬಾರದೆ ನೀರಿನಲ್ಲಿ ಮುಳಗಿರುವ  ಘಟನೆ ಶನಿವಾರ ನಡೆದಿದೆ. ಮುಳುಗುತ್ತಿದ್ದ ಯುವಕನೋರ್ವನನ್ನು ಶಾಸಕ, ಹಾಗೂ ಮಾಜಿ ಸಂಸದರ ನೆರವಿನಿಂದ ರಕ್ಷಿಸಿದ್ದಾರೆ.

ಅಭಿ ನೀರಿನಲ್ಲಿ ಮುಳಗುತ್ತಿದ್ದ ಯುವಕ. ನಾಗಮಂಗಲ ಶಾಸಕ ಎನ್.ಸುರೇಶ್ ಗೌಡ ಮತ್ತು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಸಮಯ ಪ್ರಜ್ಞೆಯಿಂದ ರಕ್ಷಿಸಲಾಗಿದೆ. ನಾಗಮಂಗಲ ತಾಲ್ಲೂಕಿನ ಬಿಂಡೇನಹಳ್ಳಿ ಗ್ರಾಮದ ಬಿಂಡೇನಹಳ್ಳಿ ಕೆರೆ ತುಂಬಿದ್ದು ಕೆರೆ ತುಂಬಿದ ಸಂತೋಷಕ್ಕೆ ಗ್ರಾಮದ ಜನತೆ ದೇವರ ಪೂಜೆ ನಡೆಸಿ ತೆಪ್ಪೋತ್ಸವ ನಡೆಸುತ್ತಿದ್ದರು.

ಬೆಂಗಳೂರಿನಿಂದ ಆಗಮಿಸಿದ್ದ ಅಭಿ ಎಂಬ ಯುವಕ ತೆಪ್ಪೋತ್ಸವದ ವೇಳೆ ಈಜಲು ಕೆರೆಗೆ ಇಳಿದು ಈಜು ಬಾರದೆ ನೀರಿನಲ್ಲಿ ಮುಳುಗುತ್ತಿದ್ದ. ಕಾಪಾಡಿ, ಕಾಪಾಡಿ ಎಂದು ಕೂಗುತ್ತಿದ್ದ. ತೆಪ್ಪೋತ್ಸವದಲ್ಲಿ ಪಾಲ್ಗೊಂಡಿದ್ದ ಶಾಸಕ ಸುರೇಶ್ ಗೌಡ, ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡರು ಹಾಗೂ ಸ್ಥಳದಲ್ಲೇ ಇದ್ದ ಜನತೆ ತೆಪ್ಪವನ್ನು ವಾಪಸ್ ಕರೆಸಿ ಯುವಕನ ರಕ್ಷಣೆ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos