ಬೆಂಗಳೂರು, ಜ. 03: ಶ್ರೀ ಹಿಮವತ್ ಕೇದಾರ ಜಗದ್ಗುರುಗಳ 7ನೇ ವರ್ಷದ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಮತ್ತು ಜನಜಾಗೃತಿ ಧರ್ಮ ಸಭೆ ಸಮಾರಂಭವನ್ನು ಜ.4 ಮತ್ತು 5 ರಂದು ಎರಡು ದಿನಗಳ ಕಾಲ ಕಾರ್ಯಕ್ರಮವನ್ನ ಬಸನಗುಡಿಯ ಶ್ರೀ ನಿಜಗುಣ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಉತ್ತರಖಂಡದ ಕೇದರ ಪೀಠದ ಜಗದ್ಗುರು ರಾವಲ್ ಪದವಿ ವಿಭೂಷಿ ಭೀಮಾಶಂಕರಲಿAಗ ಶಿವಾಚಾರ್ಯ ಭಗವತ್ಪಾದರು ಸಾನಿದ್ಯ ವಹಿಸಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಾರಂಭವನ್ನು ಉದ್ಘಟಿಸಲಿದ್ದಾರೆ. ಸಚಿವ ವಿ.ಸೋಮಣ್ಣ, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜನ್, ಶಾಸಕ ಎಲ್ ಎ. ರವಿ ಸುಬ್ರಹ್ಮಣ್ಯ, ಸೇರಿದಂತೆ ಹಲವಾರು ಗಣ್ಯವ್ಯಕ್ತಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಚಂದ್ರಯಾನ-2 ವಿಜ್ಞಾನಿಗಳಾದ ಎಂ. ವನಿತಾ, ರೀತು ಕರಿದಾಳ್ರನ್ನು ಸನ್ಮಾನಿಸುವುದಾಗಿ ತಿಳಿಸಿದರು.