ಆಂಧ್ರ ರೈತರಿಗೆ ಪವನ್ ಕಲ್ಯಾಣ್ ಆಶ್ವಾಸನೆ

ಆಂಧ್ರ ರೈತರಿಗೆ ಪವನ್ ಕಲ್ಯಾಣ್ ಆಶ್ವಾಸನೆ

ಆಂಧ್ರಪ್ರದೇಶ, ಮಾ.14, ನ್ಯೂಸ್ ಎಕ್ಸ್ ಪ್ರೆಸ್: ರಾಜಕೀಯ ಅಖಾಡಕ್ಕಿಳಿದು ಆಂಧ್ರಪ್ರದೇಶದಲ್ಲಿ ತಮ್ಮದೇ ಪ್ರಭಾವಳಿ ಸೃಷ್ಟಿಸಿರುವ ನಟ, ಜನಸೇನಾ ಪಕ್ಷದ ನಾಯಕ ಪವನ್​ ಕಲ್ಯಾಣ್​ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜನರಿಗೆ ಬಂಪರ್​ ಆಫರ್​ ಘೋಷಿಸಿದ್ದಾರೆ.

ಆಂಧ್ರಪ್ರದೇಶದಾದ್ಯಂತ ಚುನಾವಣಾ  ಪ್ರಚಾರ ಆರಂಭಿಸಿರುವ ಪವನ್​ ಕಲ್ಯಾಣ್​, ವೃದ್ಧ ರೈತರಿಗೆ ಐದು ಸಾವಿರ ಪಿಂಚಣಿ,   ಉಚಿತ ಶಿಕ್ಷಣ ಹಾಗೂ ಐದು ವರ್ಷದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ  ನೀಡಿದ್ದಾರೆ.

ನಿನ್ನೆ ರಾಜಮಂಡ್ರಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಭಾರಿ ಭರವಸೆಗಳನ್ನು ಅವರು ನೀಡಿದರು. ರೈತರಿಗೆ ವರ್ಷಕ್ಕೆ 8 ಸಾವಿರ ಹೂಡಿಕೆ ಬೆಂಬಲ,  60 ವರ್ಷ ಮೇಲ್ಪಟ್ಟ ರೈತರಿಗೆ ತಿಂಗಳಿಗೆ 5 ಸಾವಿರ ಪಿಂಚಣಿ, ಸೋಲಾರ್​ ಮೋಟಾರ್ ವಿತರಣೆಯಂತಹ ಭರವಸೆ  ನೀಡಿದರು. ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುವುದಾಗಿ ಹೇಳಿದರು.

ಕಿಂಡರ್​ಗಾರ್ಡನ್​ಯಂದ ಉನ್ನತ ಶಿಕ್ಷಣದವರೆಗೆ ಉಚಿತ ಶಿಕ್ಷಣ, ಅಧಿಕಾರಕ್ಕೆ ಬಂದ 6 ತಿಂಗಳೊಳಗೆ 1 ಲಕ್ಷ ಹಾಗೂ ಒಟ್ಟಾರೆ 10 ಲಕ್ಷ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದರು. ಪ್ರತಿ ಕುಟುಂಬಕ್ಕೆ 10 ಲಕ್ಷ ವಿಮಾ ಸೌಭ್ಯ, ಶುದ್ಧ ಕುಡಿಯುವ ನೀರು, ಹಿಂದುಳಿದ ವರ್ಗಗಳಿಗೆ ಶೇ5ರಷ್ಟು ಮೀಸಲಾತಿ, ಮೀನುಗಾರರಿಗೆ ವಿಶೇಷ ಬ್ಯಾಂಕ್​, ಮಹಿಳೆಯರಿಗೆ ಶಾಸಕಾಂಗದಲ್ಲಿ ಶೇ 33ರಷ್ಟು ಮೀಸಲಾತಿ, ಮುಸ್ಲಿಂ ಸಮುದಾಯದವರ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು  ಜಾರಿ  ಮಾಡುವುದಾಗಿ  ಘೋಷಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos