ಪವಾಡ ನಿರೀಕ್ಷೆಯಲ್ಲಿ ದೋಸ್ತಿ

ಪವಾಡ ನಿರೀಕ್ಷೆಯಲ್ಲಿ ದೋಸ್ತಿ

ಬೆಂಗಳೂರು, ಜು.16 : ಹದಿನಾರು ಶಾಸಕರ ರಾಜೀನಾಮೆ ಅಲ್ಪಮತಕ್ಕೆ ಕುಸಿದಿರುವ ದೋಸ್ತಿ ಸರಕಾರದ ಸಿಎಂ ಎಚ್ ಡಿ ಕುಮಾರಸ್ವಾಮಿ ಗುರುವಾರ(ಜುಲೈ 18) ವಿಶ್ವಾಸಮತ ಯಾಚಿಸಲಿದ್ದಾರೆ. ಸರಕಾರದ ಅಳಿವು ಉಳಿವು ನಿರ್ಧರಿಸಲು ಮುಹೂರ್ತ ಫಿಕ್ಸ್ ಆದಂತಾಗಿದೆ. ಇದರ ಮಧ್ಯೆ ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ನಿಂದ ಮಹತ್ವದ ಆದೇಶ ಹೊರಬೀಳಲಿದ್ದು, ಭಾರಿ ಕುತೂಹಲ ಹುಟ್ಟಿಸಿದೆ.
ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ವಿಧಾನಸಭೆಯಲ್ಲಿ ಅಧಿಕೃತವಾಗಿ ಪ್ರಕಟಿಸಿದರು. ಅತೃಪ್ತರ ರಾಜೀನಾಮೆ ಸಂಬಂಧದಲ್ಲಿ ಸುಪ್ರೀಂಕೋರ್ಟ್ ನೀಡುವ ತೀರ್ಪು ಮಹತ್ವದ್ದಾಗಲಿದೆ. ಈ ಮೊದಲು 10 ಶಾಸಕರು ತಮ್ಮ ರಾಜೀನಾಮೆ ಅಂಗೀಕಾರ ವಿಳಂಬ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಮತ್ತೆ ಐವರು ಇದೇ ದಾರಿ ತುಳಿದಿದ್ದು, ಈ ಶಾಸಕರ ಅರ್ಜಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದೆ. ಒಟ್ಟಾರೆ 15 ಶಾಸಕರ ರಾಜೀನಾಮೆ ಬಗ್ಗೆ ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಫ್ರೆಶ್ ನ್ಯೂಸ್

Latest Posts

Featured Videos