ಪತಿಯ ಕಿರುಕುಳ: ಆತ್ಮಹತ್ಯೆಗೆ ಶರಣಾದ ಪತ್ನಿ

ಪತಿಯ ಕಿರುಕುಳ: ಆತ್ಮಹತ್ಯೆಗೆ ಶರಣಾದ ಪತ್ನಿ

ಶಿವಮೊಗ್ಗ, ಜೂನ್.10, ನ್ಯೂಸ್ ಎಕ್ಸ್ ಪ್ರೆಸ್  : ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಊಟ-ತಿಂಡಿ ಬಿಟ್ಟು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಕಾಗಿನೆಲೆಯಲ್ಲಿ ನಡೆದಿದೆ.

ಚೈತ್ರಾ ಮೃತಪಟ್ಟ ದುರ್ದೈವಿ ಮಹಿಳೆ. ಬೆಂಗಳೂರು ಚಂದಾಪುರದಲ್ಲಿ ಮನೆ ಮಾಡಿದ್ದ ರಾಜು ತನ್ನ ಪತ್ನಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಮತ್ತಷ್ಟು ಹಣ ತರುವಂತೆ ಪೀಡಿಸುತ್ತಿದ್ದನು. ಚೈತ್ರಾ ತಂದೆ ದೊಡ್ಡಬಳ್ಳಾಪುರದಲ್ಲಿ ಇದ್ದು, ಪತಿ- ಪತ್ನಿ ಚೆನ್ನಾಗಿರಲಿ ಎಂದು ರಾಜಿ ಪಂಚಾಯ್ತಿ ಮಾಡಿಸಿದ್ದರು. ಆದರೆ ಇದು ಯಾವುದು ಸರಿ ಆಗದ ಕಾರಣ ಬೇಸರಗೊಂಡ ಚೈತ್ರಾ ಕಳೆದ ವಾರ ಊಟ-ತಿಂಡಿ ಬಿಟ್ಟು ಅಸ್ವಸ್ಥಗೊಂಡಿದ್ದರು. ನಂತರ ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತ ಚೈತ್ರಾ ಪೋಷಕರು ಪತಿ ಮನೆ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.  ಚಂದಾಪುರದ ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos