ನವದೆಹಲಿ, ಜೂನ್. 13: ಅರುಣಾಚಲ ಪ್ರದೇಶದಲ್ಲಿ ನಾಪತ್ತೆಯಾಗಿರುವ ಭಾರತೀಯ ವಾಯುಪಡೆಯ (ಐಎಎಫ್) ಎಎನ್-32 ವಿಮಾನ ಪತನವಾಗುವುದಕ್ಕೆ ಮುನ್ನ ಪರ್ವತಕ್ಕೆ ಅಪ್ಪಳಿಸಿರಬೇಕು. ಆ ಪ್ರದೇಶದಲ್ಲಿ ಮರಗಳು, ಭೂಪ್ರದೇಶ ಸುಟ್ಟು ಹೋಗಿರುವುದು ಈ ಅಂಶವನ್ನು ಪುಷ್ಟೀಕರಿಸುತ್ತದೆ ಎಂದು ಐಎಎಫ್ ಹೇಳಿದೆ.
ವಿಮಾನ ಅವಶೇಷಗಳು ಪತ್ತೆಯಾಗಿದ್ದವು. ಇದೇ ವೇಳೆ ಪ್ರತಿಕೂಲ ಹವಾಮಾನ, ಧಾರಾಕಾರ ಮಳೆಯಿಂದಾಗಿ ಶೋಧ ಕಾರ್ಯವನ್ನು ಸ್ಧಗಿತಗೊಳಿಸಿ, ಅದಕ್ಕಾಗಿ ತೆರಳಿದ್ದ 15 ಮಂದಿಯ ತಂಡವನ್ನು ಪರ್ವತ ಪ್ರದೇಶದಿಂದ ಕರೆತರಲಾಗಿದೆ.