ಪಕ್ಷದ ಕಚೇರಿಗೆ ದೇಣಿಗೆ ನೀಡಿದ್ದ ಕುರ್ಚಿಗಳನ್ನು ಹೊತ್ತೊಯ್ದ ಟಿಕೇಟ್ ವಂಚಿತ ಕೈ ಶಾಸಕ

ಪಕ್ಷದ ಕಚೇರಿಗೆ ದೇಣಿಗೆ ನೀಡಿದ್ದ ಕುರ್ಚಿಗಳನ್ನು ಹೊತ್ತೊಯ್ದ ಟಿಕೇಟ್ ವಂಚಿತ ಕೈ ಶಾಸಕ

ಔರಂಗಬಾದ್, ಮಾ, 27, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡಲು ಪಕ್ಷ ನಿರಾಕರಿಸಿದ್ದಕ್ಕೆ ಕಾಂಗ್ರೆಸ್ ಶಾಸಕನೊಬ್ಬ ತನ್ನ ಬೆಂಬಲಿಗರೊಂದಿಗೆ ಸೇರಿ ಪಕ್ಷದ ಸ್ಥಳೀಯ ಕಚೇರಿಗೆ ದೇಣಿಗೆ ನೀಡಿದ್ದ 300 ಕುರ್ಚಿಗಳನ್ನು ಹೊತ್ತೊಯ್ದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಹೌದು, ಲೋಕಸಭೆ ಚುನಾವಣೆಗೆ ತನಗೆ ಟಿಕೆಟ್ ನೀಡಲಿಲ್ಲ ಎಂದು ಅಸಮಾಧಾನಗೊಂಡ ಕಾಂಗ್ರೆಸ್ ಶಾಸಕ ಅಬ್ದುಲ್ ಸತ್ತಾರ್ ನಿನ್ನೆ ಪ್ರಾದೇಶಿಕ ಕಚೇರಿಗೆ ತಾನು ದೇಣಿಗೆ ಎಂದು ನೀಡಿದ್ದ 300 ಕುರ್ಚಿಗಳು ಸೇರಿದಂತೆ ತಾನೂ ಕೂರುತ್ತಿದ್ದ ಕುರ್ಚಿಯನ್ನು ಎತ್ತಿಕೊಂಡು ಹೋಗಿದ್ದಾರೆ.
ಮಹಾರಾಷ್ಟ್ರದ ಸಿಲ್ದೋದ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಬ್ದುಲ್ ಸತ್ತಾರ್, ನನಗೆ ಟಿಕೆಟ್ ನೀಡದಿರುವ ಹಿನ್ನೆಲೆಯಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ನನಗೆ ಸೇರಿದ ಕುರ್ಚಿಗಳನ್ನು ತೆಗೆದುಕೊಂಡು ಹೋಗಿದ್ದೇನೆ ಅದರಲ್ಲಿ ತಪ್ಪೇನಿದೆ? ಎಂದು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos