ಮಂಡ್ಯ ಏ. 15, ನ್ಯೂಸ್ ಎಕ್ಸ್ ಪ್ರೆಸ್: 2019ರ ಮಂಡ್ಯ ಲೋಕಸಭಾ ಚುನಾವಣೆಯ ಕಾವು ಜೋರಾಗುತ್ತಿದೆ. ಈ ಸಲ ಹೇಗಾದರೂ ಮಾಡಿ ಸುಮಲತಾ ಅವರನ್ನು ಗೆಲ್ಲಿಸಿಯೇ ತೀರ ಬೇಕೆಂದು ಹಠ ತೊಟ್ಟಿರುವ ಮಂಡ್ಯ ನಜರು ಮತ್ತೊಂದೆಡೆ ನಿಖಿಲ್ ಅಖಾಡದಲ್ಲಿ ತೊಡೆ ತಟ್ಟಿದ್ದಾರೆ.
2019ರ ಚುನಾವಣೆಯಲ್ಲಿ ಉಪೇಂದ್ರ ಕೂಡ ತಮ್ಮದೆ ಯಾದ ಪಕ್ಷ ಕಟ್ಟಿ ಅದೃಷ್ಟ ಪರೀಕ್ಷೆ ಬರೆಯುತ್ತಿದ್ದಾರೆ. ತಮ್ಮ ಪ್ರಜಾಕೀಯ ಪಕ್ಷದಿಂದ ಮಂಡ್ಯದಲ್ಲೂ ಅಭ್ಯರ್ಥಿಯನ್ನು ನಿಲ್ಲಿಸಿದ್ದಾರೆ. ಆದರು ಮಂಡ್ಯದಲ್ಲಿ ಸ್ಪರ್ಧಿಯೊಬ್ಬರಿಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ.
ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಅವರ ಪರ, ನಟ , ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಅವರು ಬ್ಯಾಟ್ ಬೀಸಿದ್ದಾರೆ. ಸುಮಲತಾ, ಅಂಬರೀಶ್ ಅಣ್ಣನವರ ಪತ್ನಿ, ಅವರು ನಮಗೆ ಅತ್ತಿಗೆ ಇದ್ದಂಗೆ, ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ. ಇನ್ನು ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು, ಬಳ್ಳಾರಿ ಹೊರತು ಪಡಿಸಿ ನಮ್ಮ ಪಕ್ಷದಿಂದ 27 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ರಾಜಕೀಯ ಎನ್ನುವುದು ಒಂದು ಉತ್ತಮ ಸಮಾಜ ಸೇವೆ ಎಂದಿದ್ದಾರೆ. ಆದರೆ ಈ ಹಿಂದೆ ಮಾಧ್ಯಮಗಳ ಜೊತೆ ಮಾಡಿದ ಸೂಪರ್ ಸ್ಟಾರ್ ಉಪ್ಪಿ, ಕುಟುಂಬ ರಾಜಕಾರಣಕ್ಕೆ ನನ್ನ ವಿರೋಧವಿಲ್ಲ. ನಿಖಿಲ್ ಕುಮಾರ ಸ್ವಾಮಿ ಮಂಡ್ಯದಿಂದ ಸ್ಪರ್ಧಿಸುತ್ತಿರುವುದರ ಬಗ್ಗೆ ನನ್ನ ಅಭ್ಯಂತರ ವಿಲ್ಲ. ಅವರು ನಿಂತಿರೋದಕ್ಕೆ ಬೆಂಬಲವಿದೆ. ಕುಟುಂಬ ರಾಜಕೀಯ ಮಾಡೋಕೆ ಯಾವ ಅಭ್ಯಂತರವೂ ಇಲ್ಲವೆಂದು ಪರೋಕ್ಷವಾಗಿ ನಿಖಿಲ್ ಗೆ ರಿಯಲ್ ಸ್ಟಾರ್ ಬೆಂಬಲ ಸೂಚಿಸಿದ್ದರು.