ಪಾಪದ ದುಡ್ಡು ಮಾಡಿಲ್ಲ : ಕುಮಾರಸ್ವಾಮಿ

ಪಾಪದ ದುಡ್ಡು ಮಾಡಿಲ್ಲ : ಕುಮಾರಸ್ವಾಮಿ

ಚನ್ನಪಟ್ಟಣ, ಸೆ. 20 : ‘’ನಾನು ಯಾವುದೇ ಪಾಪದ ದುಡ್ಡು ಸಂಪಾದನೆ ಮಾಡಿಲ್ಲ. ಹೀಗಾಗಿ ನಾನು ಯಾವುದೇ ಇಡಿ, ಐಟಿಗೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು, ಪ್ರಸ್ತುತ ರಾಜಕಾರಣ ಬೇಸರ ಆಗಿದೆ. ನಾನು ಸಿಎಂ ಆಗಿದ್ದು ಕೆಲವರಿಗೆ ಸಹಿಸಲು ಆಗಲಿಲ್ಲ. ಮುಖ್ಯಮಂತ್ರಿ ಹುದ್ದೆ ಮುಳ್ಳಿನ ಹಾಸಿಗೆ ಆಗಿತ್ತು ಎಂದು ಹೇಳಿದರು.
ಇನ್ನೂ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ.ಸಮ್ಮಿಶ್ರ ಸರ್ಕಾರದ ಪತನಕ್ಕೆ ಯೋಗೇಶ್ವರ್ ಮುಂದಾಳತ್ವ ವಹಿಸಿದ್ದರು. ಪ್ರಸ್ತುತ ರಾಜಕಾರಣ ನನಗೆ ಬೇಸರ ಆಗಿದೆ.
ಇದನ್ನು ನೋಡಿದರೆ ರಾಜಕೀಯವೇ ಬೇಡ ಅನ್ನಿಸುತ್ತೆ. ಬಡವರ ನೋವಿಗೆ ಸ್ಪಂದಿಸಲು ರಾಜಕೀಯದಲ್ಲಿದ್ದೇನೆ ಎಂದು ಮತ್ತೊಮ್ಮೆ ರಾಜಕೀಯ ನಿವೃತ್ತಿಯ ಮಾತನ್ನು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನುಡಿದರು.

ಫ್ರೆಶ್ ನ್ಯೂಸ್

Latest Posts

Featured Videos