ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಾವುದೇ ಕೆಲಸ ಮಾಡುತ್ತಿಲ್ಲ!

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಾವುದೇ ಕೆಲಸ ಮಾಡುತ್ತಿಲ್ಲ!

ಪೀಣ್ಯ ದಾಸರಹಳ್ಳಿ, ಸೆ. 11: ದಾಸರಹಳ್ಳಿ ಸಮೀಪ ಚಿಕ್ಕಬಾಣವರ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೋಕು ಪಂಚಾಯಿತಿಯಿಂದ ಸಭೆಯನ್ನು ಮಾಡಲಾಯಿತು. ಈ ಸಭೆಯಲ್ಲಿ ಮುಖ್ಯವಾಗಿ ನೀರಿನ ಸಮಸ್ಯೆ, ವಿದ್ಯುತ್ ದೀಪಗಳ ಸಮಸ್ಯೆ, ಕಸದ ಸಮಸ್ಯೆಗಳ ಬಗ್ಗೆ  ಚರ್ಚಿಸಲಾಯಿತು. ಗ್ರಾಮಪಂಚಾಯತ್ ನ ಕೆಲವು ಸದಸ್ಯರುಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೇಲೆ ತಮ್ಮ ಆರೋಪವನ್ನು ವ್ಯಕ್ತಪಡಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಾವುದೇ ರೀತಿಯ ಕೆಲಸವನ್ನು ಮಾಡುತ್ತಿಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಗ್ರಾಮ ಪಂಚಾಯತ್ ಸದಸ್ಯರು ಹೇಳಿದರು.

ಈ ಸಮಯದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಮರಿಸ್ವಾಮಿ  ಫಲಾನುಭವಿಗಳಿಗೆ ಸಂಧ್ಯಾ ಸುರಕ್ಷಾ ಯೋಜನೆ ಹಾಗೂ  ವಿಧವಾ ಪಿಂಚಣಿ ಪತ್ರವನ್ನು ನೀಡಿದರು.

ಈ ಸಮಯದಲ್ಲಿ ಚಿಕ್ಕಬಾಣವಾರ ಗ್ರಾಮ ಪಂಚಾಯಿತಿ ಸದಸ್ಯೆ ಭಾಗ್ಯಮ್ಮ, ತಾಲ್ಲೋಕು  ಪಂಚಾಯಿತಿ ಸದಸ್ಯ ಸುರೇಶ್, ಸದಸ್ಯರುಗಳಾದ ಮಂಜುನಾಥ್, ಹನುಮಂತಪ್ಪ, ಪ್ರಕಾಶ್, ಶ್ಯಾಮಲಾ, ಅರುಣ್ ಕುಮಾರಿ, ಸವಿತಾ, ಶಶಿಕುಮಾರ್ ಇನ್ನು ಮುಂತಾದವರು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos