ಇಸ್ಲಾಮಾಬಾದ್, ಅ.11 : ಚೌಧರಿ ಸಕ್ಕರೆ ಕಾರ್ಖನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಬಂಧಿಸಲಾಗಿದೆ. ಶುಕ್ರವಾರ ರಾಷ್ಟ್ರೀಯ ಉತ್ತರದಾಯಿತ್ವ ಬ್ಯೂರೋ ಅಧಿಕಾರಿಗಳು ನವಾಜ್ ಶರೀಫ್ ರನ್ನು ವಶಕ್ಕೆ ಪಡೆದಿದ್ದಾರೆ. ನವಾಜ್ ಶರೀಫ್ ಅವರನ್ನು ಉತ್ತರದಾಯಿತ್ವ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಧಿಕಾರಿಗಳು ಮಾಜಿ ಪ್ರಧಾನಿಯನ್ನು 15 ದಿನ ವಶಕ್ಕೆ ನೀಡುವಂತೆ ಕೊರ್ಟ್ ಗೆ ವಿನಂತಿಸಿದ್ದಾರೆ.