ನವದೆಹಲಿ, ಜ. 1 : ಭೂಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಪಾಕ್ಗೆ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರವಾಣೆ ಎಚ್ಚರಿಕೆ ನೀಡಿದ್ದಾರೆ.
ಪಾಕ್ ಪ್ರಯೋಜಕತ್ವದ ಯಾವುದೇ ಭಯೋತ್ಪಾದನೆ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಲು ಸಿದ್ಧ . ಪಾಕ್ ಭಯೋತ್ಪಾದನೆ ಹತ್ತಿಕ್ಕದಿದ್ದರೆ ನಾವು ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಧ್ವಂಸ ಮಾಡುವ ಹಕ್ಕು ಹೊಂದಿದ್ದಾರೆ ಎಂದು ಗುಡುಗಿದ್ದಾರೆ. ಪಾಕಿಸ್ತಾನವು ಭಯೋತ್ಪಾದನೆಯನ್ನು ರಾಜ್ಯನೀತಿಯ ಸಾಧನವನ್ನಾಗಿ, ನಮ್ಮ ವಿರುದ್ಧ ನಕಲಿ ಯುದ್ಧ ನಡೆಸುವ ಮಾರ್ಗವಾಗಿ ಬಳಸಿಕೊಳ್ಳುತ್ತಿದೆ.ಇದು ಹೆಚ್ಚು ಕಾಲ