ಮಂಗಳೂರು, ಜೂ. 29 : ಪ್ರೀತಿ ನಿರಾಕರಿಸಿದ ಕೋಪಕ್ಕೆ ಯುವತಿಗೆ ಚೂರಿ ಇರಿದ್ದು ಯುವಕ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳೂರಿನ ಹೊರವಲಯದ ಕುಂಪಲ ನಡೆದಿದೆ. ಬಳಿಕ ಯಾರೋ ಸ್ಥಳದಲ್ಲಿದ್ದವರು ಅಂಬ್ಯುಲೆನ್ಸ್ ಗೆ ಕರೆ ಮಾಡಿ ಇಬ್ಬರನ್ನು ಕೂಡಲೇ ಸ್ಥಳಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಕ್ತಿನಗರದ ನಿವಾಸಿ ಸುಶಾಂತ್ ಪ್ರೇಯಸಿಗೆ ಚಾಕು ಇರಿದು, ತಾನೂ ಕತ್ತು ಕೊಯ್ದುಕೊಂಡ ಪಾಗಲ್ ಪ್ರೇಮಿ.
ಸುಶಾಂತ್ ಹೈಸ್ಕೂಲ್ ನಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿ ಕೆಲಸ ಮಾಡಿಕೊಂಡಿದ್ದನ್ನು. ಬಗಲಂಬಿ ನಿವಾಸಿ ಯುವತಿ ದೀಕ್ಷಾ (22
) ಇರಿತಕ್ಕೊಳಗಾದ ಯುವತಿಯಾಗಿದ್ದಾಳೆ. ಪ್ರೀತಿ ನಿರಾಕರಿಸಿದ ಕೋಪಕ್ಕೆ ಸುಶಾಂತ್ (22) ಯುವತಿಗೆ ಚೂರಿಯಿಂದ ಇರಿದು ಯುವತಿಯನ್ನು ಗಾಯಗೊಳಿಸಿದ್ದಾನೆ. ಘಟನೆ ಸಂಬಂಧ ಮಂಗಳೂರಿನ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.