ಬಗ್ನನ್, ಮೇ. 2, ನ್ಯೂಸ್ ಎಕ್ಸ್ ಪ್ರೆಸ್: ಪಶ್ಚಿಮ ಬಂಗಾಳದಲ್ಲಿ ಮೇ. 6 ರಂದು ನಡೆಯಲಿರುವ 5ನೇ ಹಂತದ ಲೋಕಸಭಾ ಚುನಾವಣೆಯ ಸಲುವಾಗಿ ಭದ್ರತಾ ಪಡೆಯನ್ನು ಬಗ್ನನ್ ನಲ್ಲಿ ನಿಯೋಜಿಸಲಾಗಿತ್ತು. ಆದರೆ ಮತದಾನಕ್ಕೆ 4 ದಿನ ಬಾಕಿ ಇರುವಾಗಲೇ ಹಿಂಸಾಚಾರ ತಲೆದೂರಿದ್ದು, 1 ಸೈನಿಕನನ್ನು ಹತ್ಯೆಗೈಯ್ಯಲಾಗಿದೆ. ಅಸ್ಸಾಂ ರೈಫಲ್ಸ್ ನ 7ನೇ ಬೆಟಾಲಿಯನ್ನಿನ ಜವಾನ ಭೋಲನಾಥ್ ದಾಸ್ ಎಂಬುವವರೇ ಮೃತರು ಎಂಬುದು ಸಾಬೀತಾಗಿದೆ.
ಯೋಧನನ್ನು ಹತ್ಯೆಗೈದ ಆರೋಪಿಯನ್ನು ಲಕ್ಷ್ಮಿಕಾಂತ ಬುರ್ಮಾನ್ ಎಂದು ಗುರುತಿಸಲಾಗಿದ್ದು, 13 ಬಾರಿ ಆತ ಗುಂಡು ಹಾರಿಸಿದ್ದಾನೆ ಎಂಬುದು ತಿಳಿದುಬಂದಿದೆ.
ಪಶ್ಚಿಮ ಬಂಗಾಳದ ಎಲ್ಲಾ 42 ಕ್ಷೇತ್ರಗಳಲ್ಲೂ ಚುನಾವಣಾ ಆಯೋಗ ಈಗಾಗಲೇ ಸೂಕ್ಷ್ಮ ಪ್ರದೇಶಗಳು ಎಂದು ಘೋಷಿಸಿದ್ದು, 7 ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ. ಸಾಕಷ್ಟು ಭದ್ರತೆಯ ನಿಯೋಜನೆಯ ನಡುವೆಯೂ ಅಹಿತಕರ ಘಟನೆಗಳು ನಡೆಯುತ್ತಲೇ ಇದೆ.