ನಮ್ಮ ಹೋರಾಟ ನಿಲ್ಲದು

  • In State
  • January 1, 2021
  • 178 Views
ನಮ್ಮ ಹೋರಾಟ ನಿಲ್ಲದು

ಬೆಳಗಾವಿ: ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ಉತ್ತರ ರ‍್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯವರು ಶುಕ್ರವಾರ ಬೆಳಿಗ್ಗೆ ಪ್ರತ್ಯೇಕ ಧ್ವಜಾರೋಹಣ ನೆರವೇರಿಸಿದರು.
ಆ ಗ್ರಾಮದ ಬೈಲಹೊಂಗಲ ಬಸ್ ನಿಲ್ದಾಣ ಸಮೀಪದ ಭಡಕಲ್ ಬಿದಿಯ ಮುಖ್ಯ ರಸ್ತೆಯಲ್ಲಿ ಉತ್ತರ ರ‍್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಅಡಿವೇಶ ಇಟಗಿ ಹಾಗೂ ಕರ‍್ಯರ‍್ಶಿ ಶ್ರೀಕಾಂತ ಮಾಧುಭರಮಣ್ಣವರ ನೇತೃತ್ವದಲ್ಲಿ ರಾಷ್ಟ್ರಗೀತೆಯೊಂದಿಗೆ ಧ್ವಜಾರೋಹಣ ನೆರವೇರಿಸಲಾಯಿತು.
ತಕ್ಷಣ ಬಂದ ಪೊಲೀಸರು, ಆ ಧ್ವಜ ತೆರವುಗೊಳಿಸಿ ಹೋರಾಟಗಾರರನ್ನು ತಮ್ಮ ವಶಕ್ಕೆ ಪಡೆದರು.
ಈ ವೇಳೆ ಮಾತನಾಡಿದ ಅಡಿವೇಶ ಇಟಗಿ, ‘ಉತ್ತರ ರ‍್ನಾಟಕ ಅಭಿವೃದ್ಧಿ ವಿಷಯದಲ್ಲಿ ರ‍್ಕಾರ ತಾರತಮ್ಯ ಮಾಡುತ್ತಿದೆ. ಹೀಗಾಗಿ, ಪ್ರತ್ಯೇಕ ರಾಜ್ಯ ಆಗುವವರೆಗೂ ನಮ್ಮ ಹೋರಾಟ ನಿಲ್ಲದು. ಈ ಧ್ವಜಾರೋಹಣ 3ನೇ ಬಾರಿಗೆ ಮಾಡುತ್ತಿದ್ದೇವೆ. ನಾವು ಕನ್ನಡ ವಿರೋಧಿಗಳಲ್ಲ. ಆದರೆ, ನಮಗೆ ಅಭಿವೃದ್ಧಿ ಬೇಕಿದೆ. ಆದರೆ, ರ‍್ಕಾರ ಒಬ್ಬರಿಗೆ ಬೆಣ್ಣೆ; ಮತ್ತೊಬ್ಬರಿಗೆ ಸುಣ್ಣ ಹಂಚುತ್ತಾ ಬಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ‍್ಯರ‍್ಶಿ ಶ್ರೀಕಾಂತ ಮಾಧುಭರಮಣ್ಣವರ ಮಾತನಾಡಿ, ‘ಸುರ‍್ಣ ವಿಧಾನಸೌಧ ಸಂಪರ‍್ಣ ನಿರುಪಯುಕ್ತವಾಗಿದೆ’ ಎಂದರು.
ಆನಂದಗೌಡ ಪಾಟೀಲ, ಬಸವರಾಜ ಧೂಳಪ್ಪನವರ, ಗಂಗಾಧರ ಅಗಸಿಮನಿ, ಸರ‍್ಥ ಇಟಗಿ, ವಿರೂಪಾಕ್ಷ ರೊಟ್ಟಿ, ಚಂಬಣ್ಣ ವಾಲಿ, ಸಂತೋಷ ಕಾಗತಿ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos