ಓರ್ವನಿಗೆ ಹಿಗ್ಗಾಮುಗ್ಗಾ ಥಳಿತ

ಓರ್ವನಿಗೆ ಹಿಗ್ಗಾಮುಗ್ಗಾ ಥಳಿತ

ಬೆಂಗಳೂರು, ಸೆ. 28 : ಕುಡಿದ ಮತ್ತಿನಲ್ಲಿ ತಂಡವೊಂದು ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಮೈಸೂರು ಸರ್ಕಲ್ ಬಳಿ ಬಸ್ಸಿಗೆ ಅಡ್ಡ ನಿಂತು ಚಾಲಕನಿಗೆ ಅವಾಜ್ ಹಾಕಿ ತಂಡ ಹಲ್ಲೆ ನಡೆಸಿದೆ.
ಬಳಿಕ ಚಾಲಕ ಸಹಾಯಕ್ಕೆ ಬಂದ ಪ್ರಯಾಣಿಕರು, ವಾಹನ ಸವಾರರು ಕುಡುಕರನ್ನು ಹಿಡಿಯಲು ಯತ್ನಿಸಿದಾಗ ನಾಲ್ವರು ಕುಡುಕರಲ್ಲಿ ಮೂವರು ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದ ಓರ್ವನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಉಪ್ಪಾರಪೇಟೆ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos