ಆದರ್ಶ ಶಾಲೆ ಸ್ಥಳಾಂತರಕ್ಕೆ ವಿರೋಧ

ಆದರ್ಶ ಶಾಲೆ ಸ್ಥಳಾಂತರಕ್ಕೆ ವಿರೋಧ

ಪಾವಗಡ:ಪಟ್ಟಣದಲ್ಲಿರುವ ಆದರ್ಶ ಶಾಲೆಯ ಕಟ್ಟಡವನ್ನು ರಿಪೇರಿ ಮಾಡಲು ಮತ್ತು ಶಾಲೆಯನ್ನು ಸ್ಥಳಾಂತರ ಮಾಡದಂತೆ ವಿದ್ಯಾರ್ಥಿಗಳು, ಪೋಷಕರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ,  ಗ್ರೇಟ್ ೨ ತಹಶೀಲ್ದಾರ್  ಸತ್ಯ ನಾರಾಯಣ ಅವರಿಗೆ   ಮನವಿ ಪತ್ರ ಸಲ್ಲಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಪೋಷಕರಾದ ಗಿರೀಶ್ ಆದರ್ಶ ಶಾಲೆಯು ಹತ್ತು ಕೊಠಡಿಗಳಿದ್ದು, ಅದರಲ್ಲಿ ಆರು ಕೊಠಡಿಗಳ ಮೇಲ್ಚಾವಣಿ ಕುಸಿದಿದ್ದು ತುಂಬಾ ಭಯದ ವಾತಾವರಣದಲ್ಲಿ ವಿದ್ಯಾಬ್ಯಾಸ ಮಾಡಬೇಕಾಗಿದೆ ಈಗಾಗಲೇ ಸಾಕಷ್ಟು ಸಲ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ತಾಲೂಕಿನ ದಂಡಾಧಿಕಾರಿಗಳಾದ ತಾವುಗಳು ಇತ್ತ ಗಮನಹರಿಸಿ ಸುಮಾರು ನಾಲ್ಕು ನೂರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು

 

ಫ್ರೆಶ್ ನ್ಯೂಸ್

Latest Posts

Featured Videos