ಹುಬ್ಬಳ್ಳಿ, ಜ. 21: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ್ ಬಾಂಬ್ ಪತ್ತೆ ಪ್ರಕರಣ ಆತಂಕಕಾರಿ ವಿಷಯಯಾಗಿದ್ದು, ದೇಶದಲ್ಲಿ ದೇಶ ವಿರೋಧಿಗಳು ಅಭದ್ರತೆ ಸೃಷ್ಟಿಸುವ ಹುನ್ನಾರವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇತ್ತಿಚೆಗೆ ಮಂಗಳೂರಿನಲ್ಲಿ ನಡೆದ ಗಲಭೆಯಲ್ಲಿಯೇ ಅಭದ್ರತೆ ಸೃಷ್ಟಿಸುವ ಕೆಲಸ ಮಾಡಿದ್ದರು. ಆ ಗಲಭೆಯಲ್ಲಿ ಪಾಲ್ಗೊಂಡು ಅದರ ಪ್ರೇರಣೆಯಿಂದಲೇ ಈ ಘಟನೆ ಆಗಿರುವ ಸಾಧ್ಯತೆಗಳಿದ್ದು, ಈ ಬಗ್ಗೆ ತೀವ್ರವಾಗಿ ತನಿಖೆ ಮಾಡಿ ತಪ್ಪಿತಸ್ಥರನ್ನು ಬಂಧಿಸಲಾಗುವುದು. ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ವಿಮಾನ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಲ್ಲಿ ಸೂಕ್ತ ಬಿಗಿ ಭದ್ರತೆ ನೀಡಲಾಗಿದೆ ಎಂದರು.
ಎಚ್ ಡಿಕೆ ಗೆ ದೂರು ದಾಖಲಿಸಲಿ: ಕುಮಾರಸ್ವಾಮಿ ಅವರ ಹೇಳಿಕೆ ಬೇಜವಾಬ್ದಾರಿಯುತವಾಗಿದ್ದು, ಇದೊಂದು ನಾಲಾಯಕತನದ ಪರಮಾವಧಿ, ಅಷ್ಟಕ್ಕೂ ಬಾಂಬ್ ಇಟ್ಟದ್ದು ಯಾರು ಅಂತಾ ಗೊತ್ತಿದ್ದರೇ ಅವರ ಮೇಲೆ ದೂರು ದಾಖಲಿಸಲಿ ಅದನ್ನು ಬಿಟ್ಟು ಈ ರೀತಿಯ ದೇಶ ವಿರೋಧಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹರಿಹಾಯ್ದರು.