ಮತ್ತೆ ಅಪರೇಷನ್ ಕಮಲ ಫಿಕ್ಸ್..! ಗೋವಾದಲ್ಲಿ ಬಿಜೆಪಿ ರೂಮ್‍ ಬುಕ್ಕಿಂಗ್..?

ಮತ್ತೆ ಅಪರೇಷನ್ ಕಮಲ ಫಿಕ್ಸ್..! ಗೋವಾದಲ್ಲಿ ಬಿಜೆಪಿ ರೂಮ್‍ ಬುಕ್ಕಿಂಗ್..?

ಬೆಂಗಳೂರು, ಮೇ. 25, ನ್ಯೂಸ್‍ ಎಕ್ಸ್ ಪ್ರೆಸ್‍: ಪ್ರಚಂಡ ಬಹುಮತದೊಂದಿಗೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರೋದಕ್ಕೆ ಸಿದ್ಧತೆ ನಡೆಸಿದೆ. ಆದ್ರೆ ಇತ್ತ ಕರ್ನಾಟಕದಲ್ಲಿ ಬಿಜೆಪಿ ಮತ್ತೊಂದು ಸುತ್ತಿನ ಅಪರೇಷನ್ ಕಮಲಕ್ಕೆ ಪ್ಲಾನ್ ಮಾಡಿದೆ. ಲೋಕಸಭೆ ಚುನಾವಣೆ ಫಲಿತಾಂಶ ಬಂತು. ದೋಸ್ತಿ ಸರ್ಕಾರ ಕೇವಲ ಎರಡು ಸೀಟುಗಳಲ್ಲಿ ಜಯಗಳಿಸಿ ಎಲ್ಲೆಡೆ ಹೀನಾಯ ಸೋಲು ಅನುಭವಿಸಿದೆ. ಎರಡೂ ಪಕ್ಷಗಳಲ್ಲಿ ವೈಮನಸ್ಸು ಉಂಟಾಗಿರುವುದರ ಲಾಭ ಪಡೆಯಲು ಮಾಸ್ಟರ್ ಪ್ಲಾನ್ ಮಾಡಿರುವ ಬಿಜೆಪಿ ಆಪರೇಷನ್ ಕಮಲಕ್ಕೆ ಸಿದ್ಧತೆ ನಡೆಸಿದೆ.

ಗೋವಾದಲ್ಲಿ ರೂಮ್‍ ಬುಕ್‍ ?

ಅತೃಪ್ತ ಶಾಸಕರನ್ನು ಗೋವಾ ರೆಸಾರ್ಟ್‍ಗೆ ಕರೆದೊಯ್ಯಲು ಬಿಜೆಪಿ ಸಜ್ಜಾಗಿದೆ. ಗೋವಾದ ದುಬಾರಿ ಫೈಸ್ಟಾರ್‍ ರೆಸಾರ್ಟ್‍ ತಾಜ್‍ ಹಾಲಿಡೇನಲ್ಲಿ 30 ರೂಮ್‍ಗಳನ್ನು ಬಿಜೆಪಿ ಬುಕ್‍ ಮಾಡಿದೆ ಎನ್ನಲಾಗಿದೆ.  ಇದಕ್ಕಾಗಿ ಗೋವಾದ ಪ್ರಭಾವಿ ಸಚಿವರಿಗೆ ಉಸ್ತುವಾರಿ ನೀಡಲಾಗಿದೆ ಎಂದು ಹೇಳಲಾಗ್ತಿದೆ. ಈ ಹಿಂದೆ ಮುಂಬೈಗೆ ಅತೃಪ್ತ ಶಾಸಕರನ್ನು ಕರೆದೊಯ್ದು ನಡೆಸಿದ್ದ ಕಸರತ್ತು ವಿಫಲವಾಗಿತ್ತು. ಹಾಗಾಗಿ ಈ ಬಾರಿ ಆಪರೇಷನ್ ಕಮಲದ ಪ್ಲಾನ್‍ಅನ್ನು ಗೋವಾಕ್ಕೆ ಶಿಫ್ಟ್ ಮಾಡಲಾಗಿದೆ.

ಬಿಜೆಪಿ ಸೇರೋದಕ್ಕೆ ಟೈಂ ಫಿಕ್ಸ್..?

ರೆಬೆಲ್ ಶಾಸಕರೇ ಖುದ್ದು ಕಾಂಗ್ರೆಸ್‍ನ ಬಂಡಾಯ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿಗೆ ದೂರವಾಣಿ ಕರೆ ಮಾಡಿ ದೇಶದಲ್ಲಿ ಬಿಜೆಪಿ ಹವಾ ಜೋರಾಗಿದೆ. ಇದನ್ನೇ ಅಸ್ತ್ರ ಮಾಡಿಕೊಂಡು ಆಪರೇಷನ್ ಕಮಲಕ್ಕೆ ದಿನಾಂಕ ನಿಗದಿ ಮಾಡಿ ನಾವು ನಿಮ್ಮ ಜತೆ ಕೈ ಜೋಡಿಸಿದ್ದೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ಅವರ ಕಡೆ ಮಹೇಶ್ ಕುಮಟಹಳ್ಳಿ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಸೇರಿದಂತೆ ಅನೇಕ ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

ಜಾಧವ್‍ ಭೇಟಿ ಹಿಂದೆ ‘ಅಪರೇಷನ್‍ ಕಮಲ’?

ಇದಕ್ಕೆ ಪುಷ್ಟಿ ನೀಡುವಂತೆ ರಮೇಶ್ ಜಾರಕಿಹೊಳಿ ಅವರು ಇಂದು ಕಲಬುರಗಿಯಿಂದ ಖರ್ಗೆ ವಿರುದ್ಧ ಗೆಲುವು ಸಾಧಿಸಿದ ಉಮೇಶ್ ಜಾಧವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಪಕ್ಷೇತರ ಶಾಸಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡಿದೆ. ಆದರೆ, ಪಕ್ಷೇತರ ಶಾಸಕರಾದ ಆರ್.ಶಂಕರ್ ಅವರು ದೆಹಲಿಯಲ್ಲಿ ಸಿದ್ದರಾಮಯ್ಯ ಅವರ ಜತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.ಇಷ್ಟೆಲ್ಲ ಬೆಳವಣಿಗೆಗಳಾದರೂ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಮಾತ್ರ ನಾವು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಮೈತ್ರಿ ಸರ್ಕಾರದ ಬೆಳವಣಿಗೆಗಳ ಬಗ್ಗೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos