ಮಡಿಕೇರಿ, ಡಿ. 17: ವಿಧಾನಸಭಾ ಚುನಾವಣೆಗೂ ಮೊದಲು ರಾಜ್ಯದ ಎಲ್ಲ ಜಿಲ್ಲೆಗಳು ತಾಲೂಕುಗಳ ಪ್ರಮುಖ ಕೇಂದ್ರಗಳಿಗೆ ಮಂಜೂರಾಗಿದ್ದ ಇಂದಿರಾ ಕ್ಯಾಂಟೀನ್ ಮಂಜೂರಾಗಿತ್ತು.
ವಿರಾಜಪೇಟೆ-ಗೋಣಿಕೊಪ್ಪ ರಸ್ತೆಯಲ್ಲಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸಾರಿಗೆ ಸಂಸ್ಥೆಗೆ ಸೇರಿದ ಖಾಲಿ ಜಾಗದಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ಜಾಗ ಗೊತ್ತು ಪಡಿಸಲಾದರೂ ಸಾರಿಗೆ ಸಂಸ್ಥೆಯ ಪುತ್ತೂರು ಉಪ ವಿಭಾಗದ ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದ್ದರಿಂದ ಜಾಗ ಹಸ್ತಾಂತರಕ್ಕೆ ಹಾಗೂ ಅದೇ ಜಾಗದಲ್ಲಿದ್ದ ಭಾರಿ ಮರವೊಂದನ್ನು ಕೆಡವಲು ವಿವಾದದಿಂದ ಮತ್ತಷ್ಟುವಿಳಂಬವಾಯಿತು.
ಆಗಿನ ಜಿಲ್ಲಾಧಿಕಾರಿ ಮಧ್ಯಸ್ಥಿಕೆಯಿಂದ ಜಾಗ ತೆರವು ಮಾಡಲಿದ್ದ ಎಲ್ಲ ಅಡೆ ತಡೆಗಳು ಅಂತಿಮಗೊಂಡ ನಂತರ 2018ರ ಏಪ್ರಿಲ್ನಲ್ಲಿ ಆಗಿನ ಉಸ್ತುವಾರಿ ಸಚಿವ ಸೀತಾರಾಂ ಅವರಿಂದ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಲಾಯಿತು. 2019ರ ಡಿಸೆಂಬರ್ ಮೊದಲ ವಾರದಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡದ ಕಾಮಗಾರಿ ಪೂರ್ಣಗೊಂಡ ಬಳಿಕ ಈಗ ಪ್ರಾರಂಭೋತ್ಸವ ನಡೆಯಲಿದೆ.