ಅಧಿಕಾರಿಗಳಿಗೆ ಸಿಎಂ ತರಾಟೆ..!

ಅಧಿಕಾರಿಗಳಿಗೆ ಸಿಎಂ ತರಾಟೆ..!

ಬೆಂಗಳೂರು, ಡಿ. 14 : ಬೈಎಲೆಕ್ಷನ್ ಗೆದ್ದು ಸರ್ಕಾರ ಭದ್ರ ಮಾಡಿಕೊಂಡ ಬೆನ್ನಲ್ಲೇ ಸಿಎಂ ಫುಲ್ ಖದರ್ ಆಗಿದ್ದಾರೆ. ಮಂಪರು ಹಿಡಿದಿದ್ದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ. ವಿಧಾನಸೌಧದಲ್ಲಿ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಪ್ರವಾಹ ಸಂತ್ರಸ್ತರಿಗೆ ಇನ್ನೂ ಪರಿಹಾರ ವಿತರಿಸಿದ ಅಧಿಕಾರಿಗಳಿಗೆ ಚಳಿ ಬೀಡಿಸಿದ್ದಾರೆ. ಪ್ರವಾಹ ಬಂದು ಹೋಗಿ ಮೂರು ತಿಂಗಳಾದ್ರೂ ಯಾಕೆ ಪರಿಹಾರ ಕೊಟ್ಟಿಲ್ಲ..? ಇಷ್ಟು ದಿನ ನೀವು ಮಾಡಿದ್ದು ಏನು..? ಅಂತ ಫುಲ್ ಕ್ಲಾಸ್ ತಗೊಂಡಿದ್ದರು.
ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಇನ್ನೊಂದು ವಾರ ಗಡುವು ನೀಡಿರುವ ಸಿಎಂ, ಅಷ್ಟರೊಳಗೆ ಕೆಲಸ ಆಗದಿದ್ದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಸಂತ್ರಸ್ತರು ಮನೆ ಕಟ್ಟಿಕೊಳ್ಳುವಲ್ಲಿ ಇರುವ ಸಮಸ್ಯೆ ಪಟ್ಟಿ ಮಾಡಿ ಕೊಡುವಂತೆಯೂ ಖಡಕ್ ಸೂಚನೆ ಕೊಟ್ಟಿದ್ದಾರೆ. ಆಧಾರ್ ಕಾರ್ಡ್ ಇಲ್ಲದವರಿಗೆ ಚೆಕ್ ಮೂಲಕ ಪರಿಹಾರ ನೀಡುವಂತೆ ತಾಕೀತು ಮಾಡಿದ್ದಾರೆ. ಸಿಎಂ ಕೋಪಕ್ಕೆ ಅಧಿಕಾರಿಗಳು ಪತರುಗುಟ್ಟಿಹೋಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos