ದೂರು ನೀಡಲು ಬಂದವರ ಮೇಲೆ ಠಾಣಾಧಿಕಾರಿ ದರ್ಪ

ದೂರು ನೀಡಲು ಬಂದವರ ಮೇಲೆ ಠಾಣಾಧಿಕಾರಿ ದರ್ಪ

ಮಹದೇವಪುರ: ವೈಟ್ ಫೀಲ್ಡ್ ಪೋಲಿಸ್ ಠಾಣಾಧಿಕಾರಿಯ ದೌಜನ್ಯ ವಿರೋಧಿಸಿ ಗೃಹ ಮಂತ್ರಿಗಳಿಗೆ ಕೆ.ಆರ್.ಎಸ್. ನಿಯೋಗದಿಂದ ದೂರು ನೀಡಲಾಗುವುದೆಂದು ಕರ್ನಾಟಕ ರಿಪಬ್ಲಿಕ್ ಸೇನಾ ರಾಜ್ಯಾದ್ಯಕ್ಷ ಜಿಗಣಿ ಶಂಕರ್ ತಿಳಿಸಿದರು.
ಕ್ಷೇತ್ರದ ವೈಟ್ ಫೀಲ್ಡ್ ಪೋಲಿಸ್ ಠಾಣಾಧಿಕಾರಿ ದರ್ಪ ವಿರೋಧಿಸಿ ಓಪ್ ಪಾಂ ಬಳಿ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದರು. ನಾಗರಾಜ್ ಸುಮಾರು ವರ್ಷಗಳಿಂದ ಸತ್ಯ ಸಾಯಿ ಆಸ್ಪತ್ರೆಯಲ್ಲಿ ಚಾಲಕರಾಗಿ ಹಾಗೂ ಉದ್ಯಾನವನ ನಿರ್ವಹಣೆ ಹುದ್ದೆಯನ್ನು ನಿರ್ವಹಿಸುತ್ತಾ ಬಂದಿರುತ್ತಾರೆ. ಆದರೆ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಅವರಿಗೆ ಇಲ್ಲ ಸಲ್ಲದ ತೊಂದರೆ ನೀಡುತ್ತಿರುವುದಲ್ಲದೆ ವಾಸದ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಿದ್ದು, ಕಿರಿಕಿರಿ ಸಹಿಸದೆ ವೈಟ್ ಫೀಲ್ಡ್ ಪೋಲಿಸ್ ಠಾಣೆಗೆ ದೂರು ನೀಡಲು ಹೋದ ನಾಗರಾಜ್ ರನ್ನು ತಡೆದು ಬಟ್ಟೆ ಬಿಚ್ಚಿಸಿ ಸುಮಾರು ಮೂರು ಗಂಟೆಗಳ ಕಾಲ ಠಾಣೆ ಒಳಗಡೆ ಕೂರಿಸಿ ತಮ್ಮ ದರ್ಪ ತೋರಿದ್ದಾರೆ ಎಂದು ದೂರಿದರು.
ಬಡಜನರಿಗೆ ಕೆಲ ಪೋಲಿಸ್ ಠಾಣೆಗಳಲ್ಲಿ ಯಾವುದೆ ನ್ಯಾಯ ಸಿಗುವುದಿಲ್ಲ ಅಲ್ಲಿ ಶ್ರೀಮಂತರ ಅಣತಿಯಂತೆ ನಡೆದುಕೊಳ್ಳುತ್ತಾರೆ ಎಂದು ದೂರಿದರು. ವೈಟ್ ಫೀಲ್ಡ್ ಠಾಣಾಧಿಕಾರಿಯ ದೌರ್ಜನ್ಯ ಖಂಡಿಸಿ ಕೆ.ಆರ್.ಎಸ್ ಸಂಘಟನೆಯ ತಂಡದಿಂದ ಗೃಹ ಮಂತ್ರಿಗಳಿಗೆ ಹಾಗು ಮುಖ್ಯ ಮಂತ್ರಿಗಳಿಗೆ ದೂರು ನೀಡಲಾಗುವುದೆಂದರು.

ಫ್ರೆಶ್ ನ್ಯೂಸ್

Latest Posts

Featured Videos