ಕೊರೋನಾ ಪರೀಕ್ಷೆಗೆ ಸೂಚನೆ

ಕೊರೋನಾ ಪರೀಕ್ಷೆಗೆ ಸೂಚನೆ

ಮಹದೇವಪುರ:ಬಿಬಿಎಂಪಿ ವಲಯದ ಎಲ್ಲ ಭಾಗಗಳಲ್ಲಿಯೂ ಕೊರೋನ ಪರೀಕ್ಷೆ ಸರ್ಮಪಕವಾಗಿ ಮಾಡುವಂತೆ     ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅಧಿಕಾರಿಗಳಿಗೆ ಸೂಚಿಸಿದರು.

ಮಹದೇವಪುರ ಕ್ಷೇತ್ರದ  ಹೂಡಿ ಸಮೀಪದ ಖಾಸಗಿ ಹೋಟೆಲ್ ನಲ್ಲಿ  ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕೊರೊನಾ ನಿಯಂತ್ರಣ ೯ ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿದಿನ ಕಂಟೈನ್ಮೆಂಟ್ ಸ್ಥಳಗಳಲ್ಲಿ ಪರೀಕ್ಷಾ ಪ್ರಮಾಣಗಳನ್ನು ಹೆಚ್ಚಿಸುವಂತೆ, ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಹೇಳಿದರು.

ಪರೀಕ್ಷಾ ಪ್ರಮಾಣದಲ್ಲಿ ಸರ್ಮಪಕವಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮಗಳನ್ನು ಜರುಗಿಸುವುದಾಗಿ ಎಚ್ಚರಿಕೆ ನೀಡಿದರು ಕೊರೋನ ಸೋಂಕು ಹರಡುವುದನ್ನು ತಡೆಯಲು ವಾರ್ಡ್ ಮಟ್ಟದಲ್ಲಿ ಸೂಕ್ತ ಕಾರ್ಯನಿರ್ವಹಣೆ ಮಾಡಬೇಕು ಜನಪ್ರತಿನಿಧಿಗಳು ನಿಮಗೆ ಹೆಚ್ಚಿನ ಸಹಕಾರ ನೀಡಲಿದ್ದಾರೆ ಎಂದು ನುಡಿದರು.

 

ಫ್ರೆಶ್ ನ್ಯೂಸ್

Latest Posts

Featured Videos