ಕಾಮಗಾರಿ ಮುಗಿಸಲು ಆಯುಕ್ತರ ಸೂಚನೆ

ಕಾಮಗಾರಿ ಮುಗಿಸಲು ಆಯುಕ್ತರ ಸೂಚನೆ

ತುಮಕೂರು:ನಗರದ ವಾರ್ಡ್ ನಂ ೧೫ ರಲ್ಲಿ ನಡೆಯುತ್ತಿರುವ ಸ್ಮಾರ್ಟಸಿಟಿ ಕಾಮಗಾರಿಗಳನ್ನು ಮುಂದಿನ ೧೫ ದಿನಗಳಲ್ಲಿ ಮುಗಿಸಿ, ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡುವಂತೆ ಸ್ಮಾರ್ಟ್ಸಿಟಿ ಅಧಿಕಾರಿಗಳಿಗೆ ಆಯುಕ್ತರಾದ ರೇಣುಕ ಸೂಚಿಸಿದರು.

ಹದಿನೈದನೇ ವಾರ್ಡಿನ ಕಾರ್ಪೋರೇಟರ್ ಮತ್ತು ನಾಗರಿಕರ ದೂರಿನ ಹಿನ್ನೆಲೆಯಲ್ಲಿ ವಾರ್ಡಿನ ಹಲವು ರಸ್ತೆಗಳನ್ನು ಪರಿವೀಕ್ಷಣೆ ನಡೆಸಿದ ಆಯುಕ್ತರು, ವಾರ್ಡಿನ ಸಿಎಸ್‌ಐ ಲೇಔಟ್, ಎಸ್.ಎಸ್.ಪುರಂನ ಹಲವರು ರಸ್ತೆಗಳಲ್ಲಿ ಪೈಪ್‌ಲೈನ್ ಕಾಮಗಾರಿ, ಡಕ್ ನಿರ್ಮಾಣಕ್ಕೆ ಅಗೆದಿರುವ ಜಾಗವನ್ನು ಸರಿಯಾಗಿ ಮುಚ್ಚಿಲ್ಲ. ಇದರಿಂದ ಆಯಾ  ಬಡಾವಣೆಯ ನಾಗರಿಕರು ಒಡಾಡಲು ತೊಂದರೆಯಾಗುತ್ತಿದೆ. ಈ ಬಗ್ಗೆ ಹಲವರು ಪೋನ್ ಮೂಲಕ ದೂರು ನೀಡಿದ್ದರು, ಅಲ್ಲದೆ ಎಸ್.ಎಸ್.ಪುರ  ಮೊದಲನೇ ಕ್ರಾಸ್‌ನ ಬಾಲಾಜಿ ನರ್ಸಿಂgಜಿ ಹೋಂ ಬಳಿ ಗುಂಡಿ ತೆಗೆದು ವಾರಗಳೇ ಕಳೆದಿದ್ದರೂ ಮುಚ್ಚಿಲ್ಲ. ಇದರಿಂದ ಆ ಭಾಗದಲ್ಲಿ ಅಂಬುಲೆನ್ಸ್ಗಳ ಓಡಾಟಕ್ಕೆ ತೊಂದರೆಯಾಗಿದೆ ಎಂದು ಖುಜಜಿಜಣಾ ವೈದ್ಯರೇ ಆಯುಕ್ತರಲ್ಲಿ ದೂರಿದರು.

 

 

 

 

 

ಫ್ರೆಶ್ ನ್ಯೂಸ್

Latest Posts

Featured Videos