ಬೆಂಗಳೂರು,ನ. 21 : ಚಿತ್ರ ಹಿಂಸೆ ನೀಡಿ ಈಜು ಬಾರದ ಬಾಲಕನನ್ನು ಕೆರೆಯಲ್ಲಿ ಮುಳುಗಿಸಿ ಯುವಕರ ಗುಂಪೊಂದು ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಸಿಲಿಕಾನ್ ನಡೆದಿದೆ.
ಸಿಟಿಯ ಕಂಠೀರವ ಸ್ಟೇಡಿಯಂ ಬಳಿ ಮ್ಯಾನುಯಲ್, ಸೂರ್ಯ ಮತ್ತು ಚರಣ್ ಅಪ್ರಾಪ್ತ ಬಾಲಕನನ್ನು ಕೆರೆಗೆ ತಳ್ಳಿ, ಈಜು ಬರಲ್ಲ ಉಸಿರುಗಟ್ಟುತ್ತಿದೆ ಎಂದು ಬಾಲಕ ಕಿರುಚಾಡಿದರೂ ಬಿಡದೆ ನೀರಿನಲ್ಲಿ ಮುಳುಗಿಸಿದ್ದಾರೆ. ದೈಹಿಕವಾಗಿ ಹಲ್ಲೆ ಮಾಡುತ್ತಿರುವುದು ಮತ್ತು ಅವಾಚ್ಯ ಪದಗಳಿಂದ ನಿಂದಿಸುತ್ತಿರುವುದು ಕಂಡು ಬಂದಿದೆ. ಸಂಪಂಗಿ ರಾಮ ನಗರ ಪೊಲೀಸ್ ಠಾಣೆಯಲ್ಲಿ ಯುವಕರ ವಿರುದ್ಧ ಕೇಸ್ ದಾಖಲಾಗಿದೆ.