ಅಧಿಕಾರಕ್ಕಾಗಿ ರಾಜಕೀಯ-ಮಾಡು

ಅಧಿಕಾರಕ್ಕಾಗಿ ರಾಜಕೀಯ-ಮಾಡು

ಹಾಸನ, ಅ.31 : ನಾನು, ಈಗ ನನಗೆ ಕಾಂಗ್ರೇಸ್ ಪಕ್ಷಕ್ಕೆ ಬಂದಿದ್ದು ಪಶ್ಚಾತಾಪ ಆಗಿಲ್ಲ. ಆದರೆ ಬಿಜೆಪಿಯವರು ನನ್ನನ್ನು ಕಡೆಗಣಿಸಿದ್ದರು ಎಂದು ಕಾಂಗ್ರೆಸ್ ನಾಯಕ ಯೋಗಾ ರಮೇಶ್ ಅವರು ಗುರುವಾರ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಯಾವುದೇ ಸಂದರ್ಭದಲ್ಲಿ ನನ್ನ ಮಾತಿಗೆ ಬೆಲೆಕೊಡಲಿಲ್ಲ. ನಾನು ಒಂದು ನೀತಿ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದೇನೆ. ಅಧಿಕಾರಕ್ಕಾಗಿ ರಾಜಕೀಯ ಮಾಡುತ್ತಿಲ್ಲ ಎಂದರು.
ಇತ್ತೀಚೆಗೆ ಬಿಜೆಪಿ ನಾಯಕ ಎ.ಮಂಜು ಅವರ ಹುಟ್ಟು ಹಬ್ಬದ ಬ್ಯಾನರ್ನಲ್ಲಿ ಸಿದ್ದರಾಮಯ್ಯ ಅವರು ಪೋಟೋ ಕಾಣಿಸಿಕೊಂಡಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಎ.ಮಂಜು ಅವರು ಕಾಂಗ್ರೇಸ್ ಸೇರ್ಪಡೆ ಸೇರುವುದರ ಬಗ್ಗೆ ನಾನು ಹೇಳುವುದಕ್ಕಿಂತ ಅವರೇ ಹೇಳಬೇಕು. ಎ. ಮಂಜು ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದ್ದಾರೆ. ಅದು ಎಲ್ಲರಿಗೂ ಗೊತ್ತಿರುವ ವಿಚಾರ, ಯಾರೋ ಬರುತ್ತಾರೆ ಅಂತ ನಾನು ಹೆದರಿ ಕಾಂಗ್ರೇಸ್ ಪಕ್ಷ ಬಿಡೋಕಾಗುತ್ತಾ.? ಅಧಿಕಾರಕ್ಕಾಗಿ ಆ ಪಕ್ಷ, ಈ ಪಕ್ಷ ಎಂದು ಎ ಮಂಜು ಹೋಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos