ನಿತ್ಯಾನಂದ ಸ್ವಾಮಿ ಎಲ್ಲಿದ್ದಾರೆ..?

ನಿತ್ಯಾನಂದ ಸ್ವಾಮಿ ಎಲ್ಲಿದ್ದಾರೆ..?

ನವದೆಹಲಿ, ರಾಮನಗರ, ನ. 22 : ಬಿಡದಿ ಧ್ಯಾನಪೀಠದ ಸ್ವಾಮಿ ನಿತ್ಯಾನಂದ ಆಶ್ರಮಕ್ಕೆ ಬಾರದೆ ವರ್ಷ ಕಳೆದಿದೆ. ಆದರೆ, ನಿತ್ಯಾನಂದ ಸ್ವಾಮಿ ಅವರು ಎಲ್ಲಿದ್ದಾರೆ? ಹೇಗಿದ್ದಾರೆ? ಎಂದು ಪ್ರಶ್ನೆ ಕಾಡುತ್ತಿದೆ. ಸದಾ ವಿವಾದಗಳ ಮೂಲಕ ಸುದ್ದಿ ಮಾಡುತ್ತಿರುವ ಬಿಡದಿ ಧ್ಯಾನಪೀಠದ ಸ್ವಾಮಿ ನಿತ್ಯಾನಂದ ಆಶ್ರಮಕ್ಕೆ ಬಾರದೆ ವರ್ಷ ಕಳೆದಿದೆ. ಕಳೆದ 6 ತಿಂಗಳಿನಿಂದ ನ್ಯಾಯಾಲಯದ ವಿಚಾರಣೆಗೂ ಹಾಜರಾಗಿಲ್ಲ. ಸ್ವಾಮಿಗಳು ಎಲ್ಲಿ ಎಂದು ಕೇಳಿದರೆ ಆಶ್ರಮದಲ್ಲೇ ಉಳಿದುಕೊಂಡಿರುವ ಒಂದಷ್ಟು ಭಕ್ತರು ಕೊಡುವ ಉತ್ತರ ‘ದೀರ್ಘ ತಪಸ್ಸು ಮಾಡಲು ನಿತ್ಯಾನಂದ ಸ್ವಾಮಿಗಳು ತೆರಳಿದ್ದಾರೆ’! ಉತ್ತರ ಭಾರತ ಯಾತ್ರಾ ಪ್ರವಾಸದಲ್ಲಿದ್ದಾರೆ. ಗುಜರಾತ್ನಲ್ಲಿದ್ದಾರೆ ಎಂದೆಲ್ಲಾ ಸಬೂಬುಗಳು ಕೇಳಿ ಬರುತ್ತಿವೆ. ಅಷ್ಟಕ್ಕೂ ಈ ನಿತ್ಯಾನಂದಸ್ವಾಮಿ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಗುಜರಾತ್ ಪೊಲೀಸರು ಬಿಚ್ಚಿಟ್ಟಿದ್ದಾರೆ ನಿತ್ಯಾನಂದ ರಹಸ್ಯ!
ನಿತ್ಯಾನಂದ ದೇಶವನ್ನೇ ತೊರೆದು ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಗುಜರಾತ್ ಪೊಲೀಸರು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos