ಇಬ್ಬರು ವಿದ್ಯಾರ್ಥಿಗಳು ಜಲ ಸಮಾದಿ

ಇಬ್ಬರು ವಿದ್ಯಾರ್ಥಿಗಳು ಜಲ ಸಮಾದಿ

ಬೈಂದೂರು, ಅ.17 : ಈಜಲು ತೆರಳಿದ ನಾಲ್ವರು ವಿದ್ಯಾರ್ಥಿಗಳಲ್ಲಿ ಇಬ್ಬರು ನೀರುಪಾಲಾದ ಘಟನೆ ಬೈಂದೂರು ತಾಲೂಕಿನ ನಾಗೂರು ಹಳಿಗೇರಿ ನದಿಯಲ್ಲಿ ಗುರುವಾರ ಮದ್ಯಾಹ್ನ ಸಂಭವಿಸಿದೆ.
ಮೃತರನ್ನು ನಾಗೂರಿನ ಸಂದೀಪನ್ ಶಾಲೆಯ ವಿದ್ಯಾರ್ಥಿಗಳಾದ ವಂಶಿತ್ ಶೆಟ್ಟಿ (12) ಹಾಗೂ ರಿತೇಶ್ ಶೆಟ್ಟಿ (12) ಎಂದು ತಿಳಿದುಬಂದಿದೆ.
ನಾಗೂರಿನ ಸಂದೀಪನ್ ಶಾಲೆಯ 9 ಮಂದಿ ವಿದ್ಯಾರ್ಥಿಗಳು ನಾಗೂರಿನ ಕೊಕ್ಕೇಶ್ವರ ದೇವಸ್ಥಾನದ ಬಳಿ ಇರುವ ನದಿ ಬಳಿಗೆ ಹೋಗಿದ್ದಾರೆ, ಈ ಸಂದರ್ಭ ನಾಲ್ವರು ನೀರಿಗೆ ಈಜಲು ಇಳಿದ ಸಂದರ್ಭ ನೀರಿನಲ್ಲಿ ಮುಳುಗಿದ್ದಾರೆ ಇದನ್ನು ಕಂಡ ಸ್ಥಳೀಯರು ಇಬ್ಬರು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದು ಉಳಿದ ಇಬ್ಬರು ನಿರುಪಾಲಾಗಿದ್ದರೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ವಿದ್ಯಾರ್ಥಿಗಳ ಹುಡುಕಾಟ ನಡೆಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos