ನಿಮ್ಮೆಲ್ಲರ ಗುಲಾಮನಾಗಿ ಸೇವೆ ಮಾಡುತ್ತೇನೆ : ನಿಖಿಲ್ ಕುಮಾರಸ್ವಾಮಿ

ನಿಮ್ಮೆಲ್ಲರ ಗುಲಾಮನಾಗಿ ಸೇವೆ ಮಾಡುತ್ತೇನೆ  : ನಿಖಿಲ್ ಕುಮಾರಸ್ವಾಮಿ

ಮಳವಳ್ಳಿ, ಮಾ.9, ನ್ಯೂಸ್ ಎಕ್ಸ್ ಪ್ರೆಸ್: ನಾನು ಕೇವಲ ನಟನಾಗಿ ಕಾಲ ಕಳೆಯಬಹುದಿತ್ತು. ಆದರೆ, ನಮ್ಮ ಕುಟುಂಬದಲ್ಲಿನ ಹಿರಿಯರಂತೆ ನಿಮ್ಮೆಲ್ಲರ ಗುಲಾಮನಾಗಿ ನನಗು ಕೂಡ ಸೇವೆ ಮಾಡಲು ಒಂದು ಅವಕಾಶ ಕೊಡಿ ಎಂದು  ನಿಖಿಲ್ ಕುಮಾರಸ್ವಾಮಿ ಜನರಲ್ಲಿ ಮನವಿ ಮಾಡಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣ ಒಂದರಲ್ಲಿ ಡಾ.ಕೆ.ಅನ್ನದಾನಿಗೆ ಏರ್ಪಡಿಸಿದ್ದ ತವರಿನ ಸಮಾರಂಭದಲ್ಲಿ ಮಾತನಾಡಿದವರು.

ನಾನು ಸಂಬಂಧಗಳಿಗೆ ಬೆಲೆ ಕೊಡುತ್ತೇನಿ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧಿಸ ಬಹುದು. ಆದರೆ, ಯಾರೇ ನಿಲ್ಲಲಿ, ಒಳ್ಳೆಯ ಮನಸ್ಸಿನಿಂದ ಅವರನ್ನು ಸ್ವಾಗತಿಸಿ ಎಂದು ಮನವಿ ಮಾಡಿಕೊಂಡರು.

ಅಂತಿಮವಾಗಿ ತೀರ್ಪು ನೀಡೋರು ನೀವು. ತೀರ್ಪು ಏನೇ ಆದರೂ ಅದನ್ನ ನಾವು ಪ್ರೀತಿಯಿಂದ ಸ್ವಿಕರಿಸುತ್ತೇನೆ. ಲೋಕಸಭಾ ಸದಸ್ಯನಾಗಿ ನನ್ನನ್ನು ಆಯ್ಕೆ ಮಾಡಿದರೆ, ನಾನು  ನಿಮಗೆ ಯಾವಗಲು ಋಣಿಯಾಗಿರುತ್ತೇನೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos